ಆ್ಯಪ್ನಗರ

ಉಮೇಶ್‌ ಕತ್ತಿ ಏನು ಪಾಕಿಸ್ತಾನದವರಾ ಎಂದು ಪ್ರಶ್ನಿಸಿದ ಸಚಿವ ಲಕ್ಷ್ಮಣ ಸವದಿ

ಮಾತನಾಡದೆ ಇರೋಕೆ ಉಮೇಶ್ ಕತ್ತಿ ಏನು ಪಾಕಿಸ್ತಾನದವರಾ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಪ್ರಶ್ನಿಸಿದರು.

Vijaya Karnataka 23 Aug 2019, 10:35 am
ಬೆಳಗಾವಿ: 'ನಾನು ಪ್ರತಿ ದಿನ ಉಮೇಶ ಕತ್ತಿ ಜತೆ ಮಾತನಾಡುತ್ತೇನೆ. ಮಾತನಾಡದೆ ಇರೋಕೆ ಉಮೇಶ್‌ ಕತ್ತಿ ಪಾಕಿಸ್ತಾನದವರಾ? ಉಮೇಶ್‌ ಕತ್ತಿ - ನಾನು ಹಳೇ ಫ್ರೆಂಡ್ಸ್‌. ಒಂದೇ ಕುಟುಂಬದವರಂತಿದ್ದೇವೆ. 25 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇವೆ' ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದರು.
Vijaya Karnataka Web savadi


ಗುರುವಾರ ಗೋಕಾಕ ನಗರದಲ್ಲಿ ಸುದ್ದಿಗಾರರು 'ಉಮೇಶ್‌ ಕತ್ತಿ ಅವರನ್ನು ನೀವು ಭೇಟಿ ಮಾಡಿದ್ದೀರಾ? ಅವರ ಜತೆ ಮಾತನಾಡಿದ್ದೀರಾ?' ಎಂದು ಪ್ರಶ್ನಿಸಿದಾಗ ಸಚಿವರು ಈ ರೀತಿ ಉತ್ತರಿಸಿದರು.

'ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ಅದನ್ನು ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ನಾಯಕರು ಬಗೆ ಹರಿಸುತ್ತಾರೆ. ಉಪ ಚುನಾವಣೆ ಎದುರಾದರೆ ಯಾರು ನಿಲ್ಲಬೇಕು? ಯಾರನ್ನು ಗೆಲ್ಲಿಸಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ' ಎಂದರು.

'ಸಚಿವ ಸ್ಥಾನ ವಂಚಿತ ಉಮೇಶ್‌ ಕತ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆಯೇ?' ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ''ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಉಮೇಶ್‌ ಕತ್ತಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿರಬಹುದು. ಅವರ ವೈಯಕ್ತಿಕ ಭೇಟಿಗೆ ರಾಜಕೀಯ ಕಲ್ಪಿಸಬೇಡಿ. ನಾವೆಲ್ಲ ಒಂದಾಗಿ ಒಟ್ಟಾಗಿದ್ದೇವೆ. ಮುಂದಿನ 3 ವರ್ಷ 10 ತಿಂಗಳನ್ನು ಪೂರ್ಣಗೊಳಿಸುತ್ತೇವೆ. ರಾಜಕೀಯದಲ್ಲಿ ನಮ್ಮ ನಮ್ಮ ಪಕ್ಷದವರಷ್ಟೇ ಮಾತನಾಡಬೇಕು ಎಂಬ ನಿಯಮವಿದೆಯಾ? ನಾನು ಹತ್ತಾರು ಜನರೊಂದಿಗೆ ಮಾತನಾಡುತ್ತೇನೆ. ಅದೇ ರೀತಿ ಉಮೇಶ್‌ ಕತ್ತಿ ಕೂಡ ಬೇರೆ ಪಕ್ಷದ ನಾಯಕರೊಂದಿಗೆ ಮಾತನಾಡಿರಬಹುದು. ಇಂತಹದ್ದಕ್ಕೆಲ್ಲ ಅಪಾರ್ಥ ಕಲ್ಪಿಸಬೇಡಿ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ