ಆ್ಯಪ್ನಗರ

ಸಿದ್ದರಾಮಯ್ಯ ನಡೆಯಿಂದ ಬೇಸರಗೊಂಡು ಪಕ್ಷ ಬಿಟ್ಟಿದ್ದು: ಬಿಸಿ ಪಾಟೀಲ್‌

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೂತನ ಸಚಿವ ಬಿಸಿ ಪಾಟೀಲ್‌ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಏನೇನೋ ಮಾತಾಡ್ತಾರೆ. ಸಿದ್ದರಾಮಯ್ಯ ಅವರು ಜ್ಞಾನವಂತರು, ಕಾನೂನು ಕಲಿತವರು. ಒಮ್ಮೊಮ್ಮೆ ಕಾನೂನು ಗೊತ್ತಿಲ್ಲ ಅಂತಾ ಹೇಳ್ತಾರೆ. ನನಗೆ ಕಾನೂನು ಗೊತ್ತಿಲ್ಲ ಅಂದ್ರೆ 25 ವರ್ಷ ಪೊಲೀಸ್ ಅಧಿಕಾರಿ ಆಗಲು ಸಾಧ್ಯವಿತ್ತಾ. ನಾನು ಚಾರ್ಜ್‌ಶೀಟ್ ಕೊಟ್ಟ ಬಳಿಕ ವಕೀಲರ ಕೆಲಸ ಆರಂಭ ಆಗುತ್ತೆ. ನಾನು ಎಫ್‌ಐಆರ್‌ ಹಾಕಿ ಆರೋಪಿ ಅರೆಸ್ಟ್ ಮಾಡಿದ ಬಳಿಕವೇ ಲಾಯರ್ ಕೆಲಸ ಆರಂಭ ಆಗೋದು ಎಂದು ಬಿಸಿ ಪಾಟೀಲ್‌ ತಿರುಗೇಟು ನೀಡಿದರು.

Vijaya Karnataka Web 10 Feb 2020, 6:48 pm
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೂತನ ಸಚಿವ ಬಿಸಿ ಪಾಟೀಲ್‌ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಏನೇನೋ ಮಾತಾಡ್ತಾರೆ. ಸಿದ್ದರಾಮಯ್ಯ ಅವರು ಜ್ಞಾನವಂತರು, ಕಾನೂನು ಕಲಿತವರು. ಒಮ್ಮೊಮ್ಮೆ ಕಾನೂನು ಗೊತ್ತಿಲ್ಲ ಅಂತಾ ಹೇಳ್ತಾರೆ. ನನಗೆ ಕಾನೂನು ಗೊತ್ತಿಲ್ಲ ಅಂದ್ರೆ 25 ವರ್ಷ ಪೊಲೀಸ್ ಅಧಿಕಾರಿ ಆಗಲು ಸಾಧ್ಯವಿತ್ತಾ. ನಾನು ಚಾರ್ಜ್‌ಶೀಟ್ ಕೊಟ್ಟ ಬಳಿಕ ವಕೀಲರ ಕೆಲಸ ಆರಂಭ ಆಗುತ್ತೆ. ನಾನು ಎಫ್‌ಐಆರ್‌ ಹಾಕಿ ಆರೋಪಿ ಅರೆಸ್ಟ್ ಮಾಡಿದ ಬಳಿಕವೇ ಲಾಯರ್ ಕೆಲಸ ಆರಂಭ ಆಗೋದು ಎಂದು ಬಿಸಿ ಪಾಟೀಲ್‌ ತಿರುಗೇಟು ನೀಡಿದರು.
Vijaya Karnataka Web left the congress party because of siddaramaiah says bc patil
ಸಿದ್ದರಾಮಯ್ಯ ನಡೆಯಿಂದ ಬೇಸರಗೊಂಡು ಪಕ್ಷ ಬಿಟ್ಟಿದ್ದು: ಬಿಸಿ ಪಾಟೀಲ್‌



​ಪಕ್ಷ ಬಿಡಲು ಸಿದ್ದರಾಮಯ್ಯ ಅವರೇ ಮುಖ್ಯ ಕಾರಣ

ನಾವು ಸಿದ್ದರಾಮಯ್ಯ ಸಂತೋಷಕ್ಕೆ ಮಂತ್ರಿ ಆಗಿಲ್ಲ. ಜನತಾ ನ್ಯಾಯಾಲಯದಲ್ಲಿ ನಾವು ಅರ್ಹರಾಗಿದ್ದೇವೆ. ಸಿದ್ದರಾಮಯ್ಯ ನಡೆದುಕೊಂಡು ರೀತಿ ಬೇಜರಾಗಿ ಪಕ್ಷ ಬಿಟ್ಟು ಹೊರಗೆ ಬಂದಿದ್ದೇವೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಸಿ ಪಾಟೀಲ್‌ ಗುಡುಗಿದರು.

​ಕುಮಠಳ್ಳಿಗೆ ಮಂತ್ರಿ ಸ್ಥಾನ ಸಿಗದಿರುವುದು ಬೇಸರವಾಗಿದೆ

ಬಿಎಸ್‌ ಯಡಿಯೂರಪ್ಪ ಮೂರುವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಮಹೇಶ ಕುಮಠಳ್ಳಿಗೆ ಮಂತ್ರಿ ಸ್ಥಾನ ನೀಡದಿರುವುದು ನೋವಾಗಿದೆ. ಮಹೇಶ ಕುಮಠಳ್ಳಿ ಅವರಿಗೆ ಮಂತ್ರಿ ಸ್ಥಾನ ಯಾಕೆ ಕೊಟ್ಟಿಲ್ಲ ಎಂಬುದು ಗೊತ್ತಿಲ್ಲ. ಆದರೆ ಮಹೇಶ್‌ ಮಂತ್ರಿಯಾಗಬೇಕಾಗಿತ್ತು ಎಂದು ಬಿಸಿ ಪಾಟೀಲ್‌ ಹೇಳಿದ್ದಾರೆ.

​ಸಿಎಂ ಇಬ್ರಾಹಿಂ ನಾಲಗೆ ಮೇಲೆ ಹಿಡಿತವಿಲ್ಲ

ಮಾಜಿ ಸಚಿವ ಸಿ.ಎಂ ಇಬ್ರಾಹಿಂ ನಾಲಿಗೆ ಮೇಲೆ ಹಿಡಿತವಿಲ್ಲ. ಇಬ್ರಾಹಿಂ ಮಾನಸಿಕ ಅಸ್ವಸ್ಥರಂತೆ ಆಡುತ್ತಿದ್ದಾರೆ. ಒಮ್ಮೆ ಕಾಂಗ್ರೆಸ್‌ ಪಕ್ಷಕ್ಕೆ ಬೈಯ್ಯುತ್ತಾರೆ. ಅಧಿಕಾರ ಕೊಟ್ಟರೇ ಕಾಂಗ್ರೆಸ್ ಹೊಗಳ್ತಾರೆ. ಇಬ್ರಾಹಿಂಗೆ ಯಾವದರ ಮೇಲೂ ಸಮಾಧಾನ ಇಲ್ಲ. ನಮಗೆ ಬುದ್ದಿ ಹೇಳುವ ನೈತಿಕತೆ ಇಬ್ರಾಹಿಂಗೆ ಇಲ್ಲ. ಭದ್ರಾವತಿಯಿಂದ ಜನರು ಓಡಿಸಿದ್ದಾರೆ. ಇಬ್ರಾಹಿಂ ಗೆ ಎಲ್ಲಿಯೂ ಮನ್ನಣೆ ಇಲ್ಲ. ಏನೇ ಇರಲಿ ಅಂತಾ ಕಾಂಗ್ರೆಸ್ ಪಕ್ಷದಲ್ಲಿ ಜೋಕರ್ ತರಹ ಇಟ್ಟುಕೊಂಡಿದ್ದಾರೆ. ಜನರು ನಗ್ತಾರೆ ಅಂತಾ ಮಾತನಾಡುತ್ತಾರೆ. ಆದ್ರೆ ಯಾವುದೇ ಮತಗಳಾಗಿ ಪರಿವರ್ತನೆ ಆಗಲ್ಲ ಎಂದು ಬಿಸಿ ಪಾಟೀಲ್‌ ತಿಳಿಸಿದರು.

​ಡಿಸಿಎಂ ಹುದ್ದೆ ಬಗ್ಗೆ ನಮ್ಮಲ್ಲಿ ಚರ್ಚೆ ಆಗಿಲ್ಲ

ಖಂಡಿತವಾಗಿಯು ಡಿಸಿಎಂ ಲಕ್ಷ್ಮಣ ಸವದಿ ಆಯ್ಕೆ ಆಗ್ತಾರೆ. ಡಿಸಿಎಂ ಹುದ್ದೆ ಬಗ್ಗೆ ನಮ್ಮ ಗುಂಪಿನಲ್ಲಿ ಚರ್ಚೆ ಆಗಿಲ್ಲ. ಎಂದು ನೂತನ ಸಚಿವ ಬಿಸಿ ಪಾಟೀಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ