ಆ್ಯಪ್ನಗರ

ಕುದುರೆಮನೆ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಬೆಳಗಾವಿ: ತಾಲೂಕಿನ ಕುದುರೆಮನೆ ...

Vijaya Karnataka 25 Nov 2018, 5:00 am
ಬೆಳಗಾವಿ : ತಾಲೂಕಿನ ಕುದುರೆಮನೆ ಗ್ರಾಮದಲ್ಲಿ 15 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಶನಿವಾರ ಅದೇ ಗ್ರಾಮದ ಸಮೀಪದ ಹೊಲದಲ್ಲಿ ಮತ್ತೆ ಕಾಣಿಸಿಕೊಂಡಿದೆ.
Vijaya Karnataka Web BLG-2411-2-52-24PRAMOD3


ವೆಂಗುರ್ಲಾ-ಬೆಳಗಾವಿ ರಸ್ತೆ ಸಮೀಪದ ಕುದುರೆಮನೆ ಗ್ರಾಮದಲ್ಲಿ ಬೆಳಗ್ಗೆ ಸುಮಾರು 9.30 ರಷ್ಟೊತ್ತಿಗೆ ಚಿರತೆ ಕಾಣಿಸಿಕೊಂಡಿದೆ. ಆ ಚಿರತೆಯ ಫೋಟೊವನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿರುವ ಗ್ರಾಮಸ್ಥರು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. 15 ದಿನಗಳ ಅಂತರದಲ್ಲಿಯೇ ಚಿರತೆ ಮತ್ತೆ ಕಾಣಿಸಿಕೊಂಡಿದ್ದಕ್ಕೆ ಗ್ರಾಮಸ್ಥರು ಭಯಗೊಂಡಿದ್ದಾರೆ.

ತಕ್ಷಣ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ, ಅದರ ಓಡಾಟ ಹೆಚ್ಚಾಗಿ ಕಂಡಬಂದಿರುವ ಪಕ್ಕದ ಸುಪ್ಪೆ ಎನ್ನುವ ಗ್ರಾಮದ ವ್ಯಾಪ್ತಿಯಲ್ಲಿ ನಾಯಿ ಸಮೇತ ಪಂಜರ ಇಟ್ಟಿದ್ದಾರೆ. ಸುಪ್ಪೆ ಗ್ರಾಮ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದೆ. ಬೇಗ ಸೆರೆ ಹಿಡಿಯುವ ಸಲುವಾಗಿ ನೀರಿನ ಮೂಲ ಇರುವಲ್ಲಿ ಪಂಜರ ಇಟ್ಟಿದ್ದೇವೆ ಎಂದು ಆರ್‌ಎಫ್‌ಒ ಶ್ರೀಕಾಂತ ಕಡೋಲ್ಕರ್‌ ತಿಳಿಸಿದರು.

ಫೋಟೊದಲ್ಲಿ ಕಂಡಿರುವ ಪ್ರಕಾರ 15 ದಿನಗಳ ಹಿಂದೆ ಕಂಡಿದ್ದ ಚಿರತೆಗೂ ಇದಕ್ಕೂ ಹೋಲಿಕೆಯಾಗುತ್ತಿದೆ. ಅಲ್ಲದೆ, ಚಿರತೆ ಆಹಾರ ಸಿಗದೆ ತೀರಾ ಬಳಲಿದಂತೆ ಕಾಣುತ್ತಿದೆ. ಬೇಟೆಯಾಡುವಾಗ ದೇಹಕ್ಕೆ ಗಾಯ ಮಾಡಿಕೊಂಡಿರುವಂತೆ ಇದೆ. ಅದು ಹಸಿದಿರುವಂತ್ತಿದ್ದು, ಬಹು ಬೇಗ ಪಂಜರದಲ್ಲಿ ಸೆರೆಯಾಗಲಿದೆ. ಮಹಾರಾಷ್ಟ್ರದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಅವರ ವ್ಯಾಪ್ತಿಯಲ್ಲಿ ಪ್ರತ್ಯೇಕ ಪಂಜರ ಇಟ್ಟಿದ್ದಾರೆ ಎಂದು ಗೊತ್ತಾಗಿದೆ ಎಂದು ಶ್ರೀಕಾಂತ ಕಡೋಲ್ಕರ್‌ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ