ಆ್ಯಪ್ನಗರ

ಸೋಲನ್ನು ಸವಾಲಾಗಿ ಸ್ವೀಕರಿಸುವ ಪ್ರವೃತ್ತಿ ಮಕ್ಕಳಲ್ಲಿಬೆಳೆಯಲಿ

ಚಿಕ್ಕೋಡಿ: ಇಂದಿನ ಮಕ್ಕಳು ಶಿಕ್ಷಣದ ಜತೆಗೆ ...

Vijaya Karnataka 27 Oct 2019, 5:00 am
ಚಿಕ್ಕೋಡಿ: ಇಂದಿನ ಮಕ್ಕಳು ಶಿಕ್ಷಣದ ಜತೆಗೆ ಸೃಜನಾತ್ಮಕ ಕಲೆಗಳನ್ನು ಕಲಿತು ತಮ್ಮಲ್ಲಿರುವ ಕಲೆಯನ್ನು ಅನಾವರಣಗೊಳಿಸಬೇಕು. ಈ ನಿಟ್ಟಿನಲ್ಲಿಮಕ್ಕಳಿಗೆ ಪಾಲಕರು, ಶಕ್ಷಕರು ಪ್ರೇರಣೆ ನೀಡಬೇಕು ಎಂದು ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಆನಂದ ಆರವಾರೆ ಹೇಳಿದರು.
Vijaya Karnataka Web 26CKD3_53


ಅವರು, ಪಟ್ಟಣದಲ್ಲಿಚಿಕ್ಕೋಡಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಟರಾಜ ನಾಟ್ಯಾಲಯ ಕಲಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿ ವಿತರಣೆ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಶಾರದಾ ಆಶ್ರಮದ ಭಕ್ತಿಮಹಿ ಮಾತಾಜಿ ಮಾತನಾಡಿ, ಸೋಲನ್ನು ಸವಾಲಾಗಿ ಸ್ವೀಕರಿಸಿ ಯಾವುದೇ ಭಯವಿಲ್ಲದೆ ತಮ್ಮ ಸೃಜನಾತ್ಮಕತೆ ಹೊರಹೊಮ್ಮಿಸಲು ಎಲ್ಲಮಕ್ಕಳು ಪ್ರಯತ್ನಿಸಬೇಕು. ಮಕ್ಕಳ ಕಲಾ ಪ್ರತಿಭೆ ಗುರುತಿಸಲು ಇಂತಹ ವೇದಿಕೆಗಳು ಅವಶ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು.

ರಾಜೀವ ಭಟ್ಟ, ಭರತ ಕಲಾಚಂದ್ರ ಉಪಸ್ಥತರಿದ್ದರು. ಮಕ್ಕಳಿಗೆ ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ ಕಥೆ, ಕವನ, ಪ್ರಬಂಧ, ಕರಕುಶಲ ಚಿತ್ರತ್ರಕಲೆ, ಜೆಡಿ ಮಣ್ಣಿನ ಕಲೆ ಹಾಗೂ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಪ್ರಮಾಣ ಪತ್ರ ಸಹಿತ ಬಹುಮಾನ ವಿತರಿಸಲಾಯಿತು.ನಿರ್ಣಾಯಕರಾಗಿ ರೇಖಾ ಭಟ್ಟ, ಜಿ.ಎಂ. ಬಿಸಲನಾಯಿಕ, ಅಪ್ಪಾಸಾಹೇಬ ಬ್ಯಾಳೆ, ಪಟವರ್ಧನ ಕಾರ್ಯನಿರ್ವಹಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಕಾಳೆ ಪ್ರಾಸ್ತಾವಿಕ ಮಾತನಾಡಿದರು. ಸುಜಾತಾ ಮಗದುಮ ನಿರೂಪಿಸಿದರು. ರೇಖಾ ಭಟ್ಟ ಸ್ವಾಗತಿಸಿದರು. ಮಾರುತಿ ಕಮತೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ