ಆ್ಯಪ್ನಗರ

ದೇಶದ ಜನರ ಹೃದಯದಲ್ಲಿ ರಾಮ ನೆಲೆಸಲಿ

ಬೆಳಗಾವಿ : ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮ ...

Vijaya Karnataka 12 Nov 2019, 5:00 am
ಬೆಳಗಾವಿ: ಮುಂದಿನ ದಿನಗಳಲ್ಲಿಅಯೋಧ್ಯೆಯಲ್ಲಿರಾಮ ನೆಲೆಸಲಿದ್ದು, ಅದೇ ರೀತಿ ದೇಶದ ಜನರ ಹೃದಯದಲ್ಲಿರಾಮ ನೆಲಿಸಲಿ. ಹತ್ತು ಮುಖದ ರಾವಣ ಅಳಿಯಲಿ ಎಂದು ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web 11 LBS 9_53
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು.


ನಗರದ ಬಿ.ಕೆ. ಮಾಡೆಲ್‌ ಶಾಲೆ ಆವರಣದಲ್ಲಿಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮನ್‌ ನ್ಯಾಯಸುಧಾ ಮಂಗಲ ಮಹೋತ್ಸವ ಹಾಗೂ ಶ್ರೀ ಸತ್ಯಪ್ರಮೋದ ತೀರ್ಥರ 23ನೇ ಪಾದುಕಾ ಮಹಾ ಸಮಾರಾಧನೆ ಕಾರ‍್ಯಕ್ರಮದ ಎರಡನೇ ದಿನ ಸೋಮವಾರ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿಕೇಶವ ಮಾಹುಲಿ ಅವರ ನೇತೃತ್ವದಲ್ಲಿಅಖಂಡ ನಾಮಸ್ಮರಣೆ ನಡೆಯಿತು. 50 ಹೆಚ್ಚು ಭಜನಾ ಮಂಡಳಿಗಳು ಭಾಗವಹಿಸಿದ್ದವು. ಹಗಲು-ರಾತ್ರಿ ನಿರಂತರವಾಗಿ ನಡೆಯುವ ಅಖಂಡ ನಾಮಸ್ಮರಣೆಯಲ್ಲಿಗೋಕಾಕ, ಕಾಕತಿ, ಚಿಕ್ಕೋಡಿ, ರಾಮದುರ್ಗ, ಉಗಾರ, ಧಾರವಾಡದಿಂದ ಭಜನಾ ಮಂಡಳಿಗಳು ಪಾಲ್ಗೊಂಡಿವೆ.

ಕಾರ‍್ಯಕ್ರಮದಲ್ಲಿಭಾಗವಹಿಸಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶ್ರೀಗಳ ಆಶೀರ್ವಾದ ಪಡೆದರು. ಪ್ರೊ. ಜಿ.ಕೆ. ಕುಲಕರ್ಣಿ, ವ್ಯಾಸಾಚಾರ್ಯ ಅಂಬೇಕರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ