ಚಿಕ್ಕೋಡಿ: ''ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಕೃಷ್ಣಾ ನದಿಯ ನೀರು ನಿರ್ವಹಣೆಗೆ ಜಂಟಿ ಮಂಡಳಿ ರಚಿಸಬೇಕು'' ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಸಿಎಲ್ಇ ಸಂಸ್ಥೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮಹಾರಾಷ್ಟ್ರದ ಪ್ರತಿ ಗ್ರಾಮಗಳಲ್ಲಿಕೃಷ್ಣಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಇದರಿಂದ ಅವರಿಗೆ ಬೇಸಿಗೆಯಲ್ಲಿನೀರಿನ ತೊಂದರೆಯಾಗುವುದಿಲ್ಲ. ಅದೇ ಮಾದರಿಯಲ್ಲಿಹಿಪ್ಪರಗಿ ಹಿನ್ನೀರಿನ ಗ್ರಾಮಗಳಲ್ಲಿ ಬ್ಯಾರೇಜ್ ನಿರ್ಮಾಣವಾಗಬೇಕು. ಬರಗಾಲದಿಂದ ತತ್ತರಿಸಿ ಹೋಗಿರುವ ಮಳೆಯಾಶ್ರಿತ ಪ್ರದೇಶದ ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಬೇಕು. ಕರಗಾಂವ ಮತ್ತು ಮಹಾಲಕ್ಷಿತ್ರ್ಮೕ ಏತ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ'' ಎಂದು ಅವರು ತಿಳಿಸಿದರು.
''ನಿಪ್ಪಾಣಿ-ಮುಧೋಳ ಟೋಲ್ ನಾಕಾ ಸಮಸ್ಯೆ ಕುರಿತು ಪತ್ರಿಕೆಗಳಲ್ಲಿಬಂದಿರುವ ವರದಿ ಗಮನಿಸಿದ್ದು ಆ ಬಗ್ಗೆ ಅಧ್ಯಯನ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು'' ಎಂದು ಮಹಾಂತೇಶ ಕವಟಗಿಮಠ ಹೇಳಿದರು.
ಮಹೇಶ ಭಾತೆ, ಸತೀಶ ಅಪ್ಪಾಜಿಗೋಳ, ಎನ್.ಎಸ್.ವಂಟಮುತ್ತೆ, ಪ್ರಕಾಶ ಪಾಟೀಲ, ಅಪ್ಪಾಸಾಬ ಚೌಗಲಾ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.
ರಾಜು ಕಾಗೆ ಅಪೇಕ್ಷೆಯನ್ನು ಸಿಎಂಗೆ ತಿಳಿಸಿದ್ದೇವೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಆಪ್ತರನ್ನು ಕಡೆಗಣಿಸಲಾಗುತ್ತಿದೆಯೇ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾಂತೇಶ ಕವಟಗಿಮಠ,'' ಪಕ್ಷದಲ್ಲಿಅಂಥ ಯಾವುದೇ ಸಮಸ್ಯೆಯಿಲ್ಲ. ಮೂಲ ಬಿಜೆಪಿಗರು ಮತ್ತು ವಲಸಿಗರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಹೊಸದಾಗಿ ಪಕ್ಷಕ್ಕೆ ಬಂದಿರುವ ಸಂದರ್ಭದಲ್ಲಿಸ್ಥಳೀಯವಾಗಿ ವ್ಯತ್ಯಾಸಗಳು ಇರುತ್ತವೆ. ರಾಜು ಕಾಗೆ ಅವರಿಗೆ ಬಿಜೆಪಿಯ ಬಗ್ಗೆ ಅಸಮಾಧಾನ ಇಲ್ಲ. ಅವರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿಯ ಅಧ್ಯಕ್ಷರಾಗುವ ಅಪೇಕ್ಷೆ ಇದೆ. ಅದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ''ಎಂದರು.
ಚಿಕ್ಕೋಡಿ, ಗೋಕಾಕ ಜಿಲ್ಲೆಯಾಗಲಿ:
''ಆಡಳಿತದ ಹಿತದೃಷ್ಟಿಯಿಂದ ಚಿಕ್ಕೋಡಿ, ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು. ಆದರೆ ಮುಖ್ಯಮಂತ್ರಿಗಳು ಜಿಲ್ಲಾವಿಭಜನೆ ಸರಕಾರದ ಮುಂದಿಲ್ಲಎಂದು ಹೇಳಿಕೆ ನೀಡಿದ್ದಾರೆ. ಆದರೂ ಮುಂದಿನ ದಿನಗಳಲ್ಲಿಆಡಳಿತ ಹಿತದೃಷ್ಟಿಯಿಂದ ಜಿಲ್ಲೆವಿಭಜನೆ ಮಾಡುವಂತೆ ಮನವಿ ಮಾಡಲಾಗುವುದು'' ಎಂದು ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಸಿಎಲ್ಇ ಸಂಸ್ಥೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮಹಾರಾಷ್ಟ್ರದ ಪ್ರತಿ ಗ್ರಾಮಗಳಲ್ಲಿಕೃಷ್ಣಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಇದರಿಂದ ಅವರಿಗೆ ಬೇಸಿಗೆಯಲ್ಲಿನೀರಿನ ತೊಂದರೆಯಾಗುವುದಿಲ್ಲ. ಅದೇ ಮಾದರಿಯಲ್ಲಿಹಿಪ್ಪರಗಿ ಹಿನ್ನೀರಿನ ಗ್ರಾಮಗಳಲ್ಲಿ ಬ್ಯಾರೇಜ್ ನಿರ್ಮಾಣವಾಗಬೇಕು. ಬರಗಾಲದಿಂದ ತತ್ತರಿಸಿ ಹೋಗಿರುವ ಮಳೆಯಾಶ್ರಿತ ಪ್ರದೇಶದ ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಬೇಕು. ಕರಗಾಂವ ಮತ್ತು ಮಹಾಲಕ್ಷಿತ್ರ್ಮೕ ಏತ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ'' ಎಂದು ಅವರು ತಿಳಿಸಿದರು.
''ನಿಪ್ಪಾಣಿ-ಮುಧೋಳ ಟೋಲ್ ನಾಕಾ ಸಮಸ್ಯೆ ಕುರಿತು ಪತ್ರಿಕೆಗಳಲ್ಲಿಬಂದಿರುವ ವರದಿ ಗಮನಿಸಿದ್ದು ಆ ಬಗ್ಗೆ ಅಧ್ಯಯನ ಮಾಡಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು'' ಎಂದು ಮಹಾಂತೇಶ ಕವಟಗಿಮಠ ಹೇಳಿದರು.
ಮಹೇಶ ಭಾತೆ, ಸತೀಶ ಅಪ್ಪಾಜಿಗೋಳ, ಎನ್.ಎಸ್.ವಂಟಮುತ್ತೆ, ಪ್ರಕಾಶ ಪಾಟೀಲ, ಅಪ್ಪಾಸಾಬ ಚೌಗಲಾ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.
ರಾಜು ಕಾಗೆ ಅಪೇಕ್ಷೆಯನ್ನು ಸಿಎಂಗೆ ತಿಳಿಸಿದ್ದೇವೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಆಪ್ತರನ್ನು ಕಡೆಗಣಿಸಲಾಗುತ್ತಿದೆಯೇ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾಂತೇಶ ಕವಟಗಿಮಠ,'' ಪಕ್ಷದಲ್ಲಿಅಂಥ ಯಾವುದೇ ಸಮಸ್ಯೆಯಿಲ್ಲ. ಮೂಲ ಬಿಜೆಪಿಗರು ಮತ್ತು ವಲಸಿಗರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಹೊಸದಾಗಿ ಪಕ್ಷಕ್ಕೆ ಬಂದಿರುವ ಸಂದರ್ಭದಲ್ಲಿಸ್ಥಳೀಯವಾಗಿ ವ್ಯತ್ಯಾಸಗಳು ಇರುತ್ತವೆ. ರಾಜು ಕಾಗೆ ಅವರಿಗೆ ಬಿಜೆಪಿಯ ಬಗ್ಗೆ ಅಸಮಾಧಾನ ಇಲ್ಲ. ಅವರಿಗೆ ರಾಜ್ಯ ಮಟ್ಟದ ನಿಗಮ ಮಂಡಳಿಯ ಅಧ್ಯಕ್ಷರಾಗುವ ಅಪೇಕ್ಷೆ ಇದೆ. ಅದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ''ಎಂದರು.
ಚಿಕ್ಕೋಡಿ, ಗೋಕಾಕ ಜಿಲ್ಲೆಯಾಗಲಿ:
''ಆಡಳಿತದ ಹಿತದೃಷ್ಟಿಯಿಂದ ಚಿಕ್ಕೋಡಿ, ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು. ಆದರೆ ಮುಖ್ಯಮಂತ್ರಿಗಳು ಜಿಲ್ಲಾವಿಭಜನೆ ಸರಕಾರದ ಮುಂದಿಲ್ಲಎಂದು ಹೇಳಿಕೆ ನೀಡಿದ್ದಾರೆ. ಆದರೂ ಮುಂದಿನ ದಿನಗಳಲ್ಲಿಆಡಳಿತ ಹಿತದೃಷ್ಟಿಯಿಂದ ಜಿಲ್ಲೆವಿಭಜನೆ ಮಾಡುವಂತೆ ಮನವಿ ಮಾಡಲಾಗುವುದು'' ಎಂದು ಮಹಾಂತೇಶ ಕವಟಗಿಮಠ ಹೇಳಿದರು.