ಅಥಣಿ : ಭಾರತದ ವಿರುದ್ಧ ಘೋಷಣೆ ಕೂಗಿ ಭಾರತದಲ್ಲೇ ಇದ್ದುಕೊಂಡು ಜಮ್ಮು ಕಾಶ್ಮೀರ ನೀಡಿ ಎಂದು ಭಾರತದ ವಿರೋಧಿ ಹೇಳಿಕೆ ನೀಡುತ್ತಿರುವ ದೇಶದ್ರೋಹಿಗಳ ವಿರುದ್ಧ ಯುವ ಜನತೆ ಒಗ್ಗೂಡಿ ಹೋರಾಡಬೇಕು ಎಂದು ಎಬಿವಿಪಿ ರಾಷ್ಟ್ರಿಯ ಕಾರ್ಯಕಾರಿಣಿ ಸದಸ್ಯ ರಾಜೇಶ ಗೌರಾಣಿ ಹೇಳಿದರು.
ಪಟ್ಟಣದಲ್ಲಿ ನಡೆದ ಬೃಹತ್ ವಿವೇಕ ತಿರಂಗಾ ರಾರಯಲಿಯಲ್ಲಿ ಪಾಲ್ಗೊಂಡು ಅವರು ಯುವಕರಿಗೆ ಕರೆ ನೀಡಿದರು.
ಶಿಕಾಗೊ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ 125ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವೇಕ ತಿರಂಗಾ ರಾರಯಲಿಯಲ್ಲಿ 250ಮೀ. ಉದ್ದದ ರಾಷ್ಟ್ರ ಧ್ವಜವನ್ನು ಪಟ್ಟಣದ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ನಂತರ ನಗರದ ಗಚ್ಚಿನಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜೆಇ ಶಿಕ್ಷ ಣ ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿದರು.
ಜಿಲ್ಲಾ ಎಬಿವಿಪಿ ಪ್ರಮುಖರಾದ ಮಹಾಲಿಂಗ ಮೆತ್ರಿ, ತಾಲೂಕಾ ಪದಾಧಿಕಾರಿಗಳಾದ ಸಚಿನ್ ಹಿರೇಮಠ, ವಿಶ್ವನಾಥ ಪಾಲ್ಗೊಂಡಿದ್ದರು . ಕೆಎಲ್ಇ ಸಂಸ್ಥೆಯ ಪ್ರೌಡಶಾಲೆ ವಿದ್ಯಾರ್ಥಿಗಳು ಎನ್ಸಿಸಿ ಬ್ಯಾಂಡ್ ಬಾರಿಸಿಸುವ ಮೂಲಕ ಗಮನ ಸೆಳೆದರು.
ಪಟ್ಟಣದಲ್ಲಿ ನಡೆದ ಬೃಹತ್ ವಿವೇಕ ತಿರಂಗಾ ರಾರಯಲಿಯಲ್ಲಿ ಪಾಲ್ಗೊಂಡು ಅವರು ಯುವಕರಿಗೆ ಕರೆ ನೀಡಿದರು.
ಶಿಕಾಗೊ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ 125ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವೇಕ ತಿರಂಗಾ ರಾರಯಲಿಯಲ್ಲಿ 250ಮೀ. ಉದ್ದದ ರಾಷ್ಟ್ರ ಧ್ವಜವನ್ನು ಪಟ್ಟಣದ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ನಂತರ ನಗರದ ಗಚ್ಚಿನಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜೆಇ ಶಿಕ್ಷ ಣ ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿದರು.
ಜಿಲ್ಲಾ ಎಬಿವಿಪಿ ಪ್ರಮುಖರಾದ ಮಹಾಲಿಂಗ ಮೆತ್ರಿ, ತಾಲೂಕಾ ಪದಾಧಿಕಾರಿಗಳಾದ ಸಚಿನ್ ಹಿರೇಮಠ, ವಿಶ್ವನಾಥ ಪಾಲ್ಗೊಂಡಿದ್ದರು . ಕೆಎಲ್ಇ ಸಂಸ್ಥೆಯ ಪ್ರೌಡಶಾಲೆ ವಿದ್ಯಾರ್ಥಿಗಳು ಎನ್ಸಿಸಿ ಬ್ಯಾಂಡ್ ಬಾರಿಸಿಸುವ ಮೂಲಕ ಗಮನ ಸೆಳೆದರು.