ಆ್ಯಪ್ನಗರ

ನಿರ್ಮಾಣ ಉದ್ಯಮದ ಸಂಕಷ್ಟದಲ್ಲಿ ನಿರ್ಮಾತೃಗಳು ಒಗ್ಗೂಡಲಿ

ಬೆಳಗಾವಿ: ಕಟ್ಟಡ ನಿರ್ಮಾಣ ಉದ್ಯಮ ಸಂಕಷ್ಟದಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ನಿರ್ಮಾತೃಗಳು ಒಗ್ಗಟ್ಟು ...

Vijaya Karnataka 17 Mar 2019, 5:00 am
ಬೆಳಗಾವಿ : ಕಟ್ಟಡ ನಿರ್ಮಾಣ ಉದ್ಯಮ ಸಂಕಷ್ಟದಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ನಿರ್ಮಾತೃಗಳು ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯತೆ ಇದೆ ಎಂದು ಕ್ರೆಡೈ ರಾಜ್ಯ ಅಧ್ಯಕ್ಷ ಜಗದೀಶ ಬಾಬು ಸಲಹೆ ನೀಡಿದರು.
Vijaya Karnataka Web BLG-1603-2-52-16CREDAI


ಅವರು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕ್ರೆಡೈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಿರ್ಮಾಣ ಉದ್ಯಮಕ್ಕೆ ಇದೊಂದು ಪ್ರಕ್ಷುಬ್ಧ ಕಾಲವಾಗಿದ್ದು ಮುಂಬರುವ ನಾಲ್ಕು ವರ್ಷಗಳು ಉದ್ಯಮದ ಪಾಲಿಗೆ ಸುವರ್ಣ ವರ್ಷಗಳಾಗುವ ಭರವಸೆ ವ್ಯಕ್ತಪಡಿಸಿದರು.

ಅತಿಥಿಗಳು ಹಾಗೂ ಕ್ರೆಡೈ ಪದಾಧಿಕಾರಿಗಳು ಸಸಿಗೆ ನೀರೆರೆಯುವ ಮೂಲಕ ಸಭೆಗೆ ಚಾಲನೆ ನೀಡಿದರು. ಕಳೆದ ಎರಡು ಅವಧಿಗಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಕ್ವಾಯಿಸ್‌ ನೂರಾನಿ ತಮ್ಮ ಅವಧಿಯಲ್ಲಿನ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.

ಕ್ರೆಡೈ ಕರ್ನಾಟಕ ಪದಾಧಿಕಾರಿ ಶಂಕರ ಶಾಸ್ತ್ರಿ, ಆರ್‌. ನಾಗರಾಜ, ಜಂಟಿ ಕಾರ್ಯದರ್ಶಿ ಕೆ. ಶ್ರೀರಾಮ ಮತ್ತಿತರರು ಕ್ವಾಯಿಸ್‌ ನೂರಾನಿಯವರ ಅಧ್ಯಕ್ಷತೆಯಲ್ಲಿ ಕೈಗೊಂಡಿದ್ದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಇದು ಕರ್ನಾಟಕ, ಗೋವಾ, ಮಹಾರಾಷ್ಟ್ರ ಭಾಗದಲ್ಲೇ ಮಾದರಿ ಕಾರ್ಯಗಳಾಗಿವೆ ಎಂದು ಶ್ಲಾಘಿಸಿದರು.

ಕಾರ್ಯದರ್ಶಿ ಹರ್ಷದ್‌ ಕಲಘಟಗಿ, ವಿಜಯ ಭಂಡಾರಿ, ಕ್ರೆಡೈ ಕರ್ನಾಟಕ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ ಮಾತನಾಡಿದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಿರಿಯ ಅಧಿಕಾರಿ ಇಂದ್ರನೀಲ್‌ ಭಾಂಜಾ, ಪ್ರಣವ್‌ ಕನೋಡಿಯಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ