Please enable javascript.ಕಾಂಗ್ರೆಸ್‌ ಗೆಲುವಿಗಾಗಿ ಅಥಣಿಯಲ್ಲೇ ಮನೆ ಮಾಡುವೆ - Let's make a home in the Athani for the win - Vijay Karnataka

ಕಾಂಗ್ರೆಸ್‌ ಗೆಲುವಿಗಾಗಿ ಅಥಣಿಯಲ್ಲೇ ಮನೆ ಮಾಡುವೆ

Vijaya Karnataka 10 Apr 2018, 5:00 am
Subscribe

ಕಾಂಗ್ರೆಸ್‌ ಗೆಲುವಿಗಾಗಿ ಅಥಣಿಯಲ್ಲೇ ಮನೆ ಮಾಡುವೆ -ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ವಿಕ ಸುದ್ದಿಲೋಕ ಹಲ್ಯಾಳ ನಾನು ಅಥಣಿಯಲ್ಲಿಯೇ ಮನೆ ಮಾಡಿ ...

lets make a home in the athani for the win
ಕಾಂಗ್ರೆಸ್‌ ಗೆಲುವಿಗಾಗಿ ಅಥಣಿಯಲ್ಲೇ ಮನೆ ಮಾಡುವೆ

ಹಲ್ಯಾಳ: ನಾನು ಅಥಣಿಯಲ್ಲಿಯೇ ಮನೆ ಮಾಡಿ ಬಿಜೆಪಿ ಸೋಲಿಸಿ ಕಾಂಗ್ರೆಸ್‌ ಪಕ್ಷ ವನ್ನು ಗೆಲ್ಲಿಸುತ್ತೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸಮೀಪದ ದರೂರ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಗೋಕಾಕ ಕ್ಷೇತ್ರದಲ್ಲಿ ನನ್ನನ್ನು ಕಾರ್ಯಕರ್ತರು ಹಾಗೂ ಮುಖಂಡರು ಗೆಲ್ಲಿಸುತ್ತಾರೆ. ಅಥಣಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಪಕ್ಷ ದ ಮುಖಂಡರ ತಪ್ಪಿನಿಂದ ಕಾಂಗ್ರೆಸ್‌ ಸೋತಿದೆ. ಬಿಜೆಪಿಯ ಸ್ಥಳೀಯ ಶಾಸಕರು ಕಾಂಗ್ರೆಸ್‌ನಲ್ಲಿನ ಒಡಕು ಬಳಸಿಕೊಂಡು ಗೆದ್ದಿದ್ದಾರೆ ಹೊರತು ಸ್ವಂತ ಬಲದಿಂದ ಅಲ್ಲ ಎಂದರು.

ಅಥಣಿ ಕ್ಷೇತ್ರದಲ್ಲಿ ಸದಾಶಿವ ಬೂಟಾಳಿ, ಮಹೇಶ ಕುಮಠೋಳಿ, ಎಸ್‌.ಎಂ. ನಾಯಿಕ ಯಾರಿಗೆ ಟಿಕೆಟ್‌ಸಿಕ್ಕರೂ ಪ್ರಮಾಣಿಕವಾಗಿ ಪಕ್ಷ ದ ಪರ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ ರಮೇಶ ಜಾರಕಿಹೊಳಿ, ಅಥಣಿ, ಕಾಗವಾಡ, ಕುಡಚಿ, ನಿಪ್ಪಾಣಿ, ರಾಯಬಾಗ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಸಂಕಲ್ಪ ಮಾಡಿದ್ದೇನೆ. ಪಕ್ಷ ಕ್ಕೆ ಜನ ಬೆಂಬಲವಿದ್ದು, ಇದನ್ನು ಮತಗಳಾಗಿ ಪರಿವರ್ತಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಕಿರಣಗೌಡ ಪಾಟೀಲ, ಮಹೇಶ ಕುಮಠೋಳಿ, ಗಜಾನನ ಮಂಗಸೂಳಿ, ಅನಿಲ ಸುಣದೋಳಿ, ಸದಾಶಿವ ಬುಟಾಳಿ, ಚಿದಾನಂದ ಮುಕಣಿ, ಎಸ್‌.ಎಸ್‌. ನಾಯಿಕ, ಸಂಗಮೇಶ ಇಂಗಳಿ, ಅಮೂಲ ನಾಯಿಕ, ಅಜಿತ ಶಿಂಧೆ, ಹಣಮಂತ ಲೋಕೂರ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ