ಸಂತೋಷ ರಾ. ಬಡಕಂಬಿ ಅಥಣಿ
ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಕಂಡು, ಕೇಳರಿಯದ ತಾಪಮಾನ ಸೃಷ್ಟಿಯಾಗಿದ್ದು ಬಿಸಿಲಿನ ಝಳಕ್ಕೆ ಜನರಷ್ಟೇ ಅಲ್ಲದೆ ಜಾನುವಾರುಗಳೂ ಬಸವಳಿಯುತ್ತಿವೆ.
ಸತತ ಬರಗಾಲ ಎದುರಿಸುತ್ತಿರುವ ತಾಲೂಕಿನಲ್ಲಿ ಈ ಬಾರಿ ಸುಮಾರು 43 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ದಾಖಲಾಗಿದೆ. ಬೇಸಿಗೆ ಮುಂಚೆಯೇ ಗೋಶಾಲೆ ತೆರೆದು ತಾಲೂಕಿನ ಜಾನುವಾರುಗಳಿಗೆ ಮೇವು, ನೀರು ಹಾಗೂ ನೆರಳಿನ ಆಶ್ರಯ ನೀಡಬೇಕಾದ ತಾಲೂಕು ಆಡಳಿತ, ಚುನಾವಣೆಯ ಅವಸರದಲ್ಲಿ ಗೋ ಶಾಲೆಗಳನ್ನು ತೆರೆಯದೆ ಕೇವಲ 20 ಕಡೆಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿ ಕೈತೊಳೆದುಕೊಂಡಿದೆ.
ನೆರಳಿನ ಸಮಸ್ಯೆ: ಅಲ್ಲಲ್ಲಿ ಜಾಲಿ, ಹುಣಸೆ ಗಿಡ, ಮರಗಳ ನೆರಳೇ ಜಾನುವಾರುಗಳಿಗೆ ಆಶ್ರಯವಾಗಿದೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ದನಕರುಗಳು, ಕುರಿಗಳು ನೆರಳಿಗಾಗಿ ಹಾತೊರೆಯುತ್ತಿವೆ. ಬಾಯಾರಿದ ದನಕರುಗಳು ಗುಂಪುಗುಂಪಾಗಿ ನೆರಳು ಸಿಕ್ಕ ಕಡೆ ಆಶ್ರಯ ಪಡೆಯುವಂತಾಗಿದೆ.
ಮೇವಿನ ಅಭಾವಕ್ಕೆ ರೈತ ಕಂಗಾಲು: ತಾಲೂಕಿನಲ್ಲಿ ಸುಮಾರು 20 ಮೇವಿನ ಬ್ಯಾಂಕ್ಗಳನ್ನು ಆಡಳಿತ ನಿರ್ಮಾಣ ಮಾಡಿದ್ದರೂ ಅದು ಅಲ್ಲಿನ ದನ ಕರುಗಳಿಗೆ ಸಾಕಾಗುತ್ತಿಲ್ಲ. ರೈತರು ನೇರವಾಗಿ ಮೇವು ಬೆಳೆದು ದನಗಳಿಗೆ ತಿನ್ನಿಸಬೇಕೆಂದರೆ ಮಳೆಯ ಕೊರತೆ ಅದಕ್ಕೂ ಬಾಧೆಯಾಗಿದೆ. ಇರುವ ದನಕರುಗಳನ್ನು ಬದುಕಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.
ಕೆಲವೆಡೆ ಮೇವು ಬ್ಯಾಂಕ್ ಪ್ರಾರಂಭವಾಗಿದ್ದರೂ ಅವು ದೂರದಲ್ಲಿರುವ ಕಾರಣ ರೈತರು ಅಲ್ಲಿ ಒಯ್ದು ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಸುಗಳನ್ನು ತಮ್ಮ ಮನೆಯಲ್ಲಿಯೇ ಕಟ್ಟಿ ಅವುಗಳಿಗೆ ಅಲ್ಲಿಯೇ ಮೇವು ಹುಡುಕಿ ತಂದು ಒದಗಿಸುವ ಪರಿಸ್ಥಿತಿ ಬಂದೊದಗಿದೆ.
ಕಟುಕರ ಪಾಲು: ತಾಪಮಾನ ಸಹಿಸಲಾಗದೆ, ಸಕಾಲಕ್ಕೆ ನೀರು, ಮೇವು ಲಭ್ಯವಾಗದೆ ಬಹುತೇಕ ಜಾನುವಾರುಗಳು ಸೊರಗಿ ಹೋಗಿದ್ದು ಆರ್ಥಿಕವಾಗಿ ಸೊರಗಿರುವ ರೈತರಿಗೆ ಅವುಗಳ ಪಾಲನೆ, ಪೋಷಣೆ ಭಾರವೆನಿಸಿದೆ. ಹೀಗಾಗಿ ಅವುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಹಲವರು ಬಂದಿದ್ದು, ಈ ವ್ಯವಹಾರದಲ್ಲಿ ಅನೇಕ ದನಕರುಗಳು ಕಟುಕರ ಪಾಲಾಗುತ್ತಿರುವುದು ಶೋಚನೀಯ.
ಹೈನುಗಾರಿಕೆ ಕುಸಿತ: ತಾಲೂಕಿನಲ್ಲಿ ಉಂಟಾದ ವಿಷಮ ಸ್ಥಿತಿಯಿಂದ ಹೈನುಗಾರಿಕೆ ಪ್ರಮಾಣದಲ್ಲೂ ಗಣನೀಯ ಇಳಿಮುಖವಾಗಿದೆ. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ತಯಾರಿಕೆಯಲ್ಲಿ ಸ್ವಾವಲಂಬಿಯಾಗಿದ್ದವರು ಅವುಗಳನ್ನು ಬೇರೆಡೆಯಿಂದ ಖರೀದಿಸುವ ಹಂತಕ್ಕೆ ಬಂದಿದ್ದಾರೆ.
ಈಗಲಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಜಾನುವಾರುಗಳಿಗೆ ಸೂಕ್ತ ನೆರಳು, ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮಾಸಾಂತ್ಯಕ್ಕೆ ಮುನ್ನವೇ ದಯನೀಯ ಸ್ಥಿತಿ ಉಂಟಾಗಲಿದೆ.
-ಸುಭಾಷ ಮಾಳಿ, ರೈತರು, ಪಾರ್ಥನಳ್ಳಿ.
ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಕಂಡು, ಕೇಳರಿಯದ ತಾಪಮಾನ ಸೃಷ್ಟಿಯಾಗಿದ್ದು ಬಿಸಿಲಿನ ಝಳಕ್ಕೆ ಜನರಷ್ಟೇ ಅಲ್ಲದೆ ಜಾನುವಾರುಗಳೂ ಬಸವಳಿಯುತ್ತಿವೆ.
ಸತತ ಬರಗಾಲ ಎದುರಿಸುತ್ತಿರುವ ತಾಲೂಕಿನಲ್ಲಿ ಈ ಬಾರಿ ಸುಮಾರು 43 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ದಾಖಲಾಗಿದೆ. ಬೇಸಿಗೆ ಮುಂಚೆಯೇ ಗೋಶಾಲೆ ತೆರೆದು ತಾಲೂಕಿನ ಜಾನುವಾರುಗಳಿಗೆ ಮೇವು, ನೀರು ಹಾಗೂ ನೆರಳಿನ ಆಶ್ರಯ ನೀಡಬೇಕಾದ ತಾಲೂಕು ಆಡಳಿತ, ಚುನಾವಣೆಯ ಅವಸರದಲ್ಲಿ ಗೋ ಶಾಲೆಗಳನ್ನು ತೆರೆಯದೆ ಕೇವಲ 20 ಕಡೆಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿ ಕೈತೊಳೆದುಕೊಂಡಿದೆ.
ನೆರಳಿನ ಸಮಸ್ಯೆ: ಅಲ್ಲಲ್ಲಿ ಜಾಲಿ, ಹುಣಸೆ ಗಿಡ, ಮರಗಳ ನೆರಳೇ ಜಾನುವಾರುಗಳಿಗೆ ಆಶ್ರಯವಾಗಿದೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ದನಕರುಗಳು, ಕುರಿಗಳು ನೆರಳಿಗಾಗಿ ಹಾತೊರೆಯುತ್ತಿವೆ. ಬಾಯಾರಿದ ದನಕರುಗಳು ಗುಂಪುಗುಂಪಾಗಿ ನೆರಳು ಸಿಕ್ಕ ಕಡೆ ಆಶ್ರಯ ಪಡೆಯುವಂತಾಗಿದೆ.
ಮೇವಿನ ಅಭಾವಕ್ಕೆ ರೈತ ಕಂಗಾಲು: ತಾಲೂಕಿನಲ್ಲಿ ಸುಮಾರು 20 ಮೇವಿನ ಬ್ಯಾಂಕ್ಗಳನ್ನು ಆಡಳಿತ ನಿರ್ಮಾಣ ಮಾಡಿದ್ದರೂ ಅದು ಅಲ್ಲಿನ ದನ ಕರುಗಳಿಗೆ ಸಾಕಾಗುತ್ತಿಲ್ಲ. ರೈತರು ನೇರವಾಗಿ ಮೇವು ಬೆಳೆದು ದನಗಳಿಗೆ ತಿನ್ನಿಸಬೇಕೆಂದರೆ ಮಳೆಯ ಕೊರತೆ ಅದಕ್ಕೂ ಬಾಧೆಯಾಗಿದೆ. ಇರುವ ದನಕರುಗಳನ್ನು ಬದುಕಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.
ಕೆಲವೆಡೆ ಮೇವು ಬ್ಯಾಂಕ್ ಪ್ರಾರಂಭವಾಗಿದ್ದರೂ ಅವು ದೂರದಲ್ಲಿರುವ ಕಾರಣ ರೈತರು ಅಲ್ಲಿ ಒಯ್ದು ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಸುಗಳನ್ನು ತಮ್ಮ ಮನೆಯಲ್ಲಿಯೇ ಕಟ್ಟಿ ಅವುಗಳಿಗೆ ಅಲ್ಲಿಯೇ ಮೇವು ಹುಡುಕಿ ತಂದು ಒದಗಿಸುವ ಪರಿಸ್ಥಿತಿ ಬಂದೊದಗಿದೆ.
ಕಟುಕರ ಪಾಲು: ತಾಪಮಾನ ಸಹಿಸಲಾಗದೆ, ಸಕಾಲಕ್ಕೆ ನೀರು, ಮೇವು ಲಭ್ಯವಾಗದೆ ಬಹುತೇಕ ಜಾನುವಾರುಗಳು ಸೊರಗಿ ಹೋಗಿದ್ದು ಆರ್ಥಿಕವಾಗಿ ಸೊರಗಿರುವ ರೈತರಿಗೆ ಅವುಗಳ ಪಾಲನೆ, ಪೋಷಣೆ ಭಾರವೆನಿಸಿದೆ. ಹೀಗಾಗಿ ಅವುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಹಲವರು ಬಂದಿದ್ದು, ಈ ವ್ಯವಹಾರದಲ್ಲಿ ಅನೇಕ ದನಕರುಗಳು ಕಟುಕರ ಪಾಲಾಗುತ್ತಿರುವುದು ಶೋಚನೀಯ.
ಹೈನುಗಾರಿಕೆ ಕುಸಿತ: ತಾಲೂಕಿನಲ್ಲಿ ಉಂಟಾದ ವಿಷಮ ಸ್ಥಿತಿಯಿಂದ ಹೈನುಗಾರಿಕೆ ಪ್ರಮಾಣದಲ್ಲೂ ಗಣನೀಯ ಇಳಿಮುಖವಾಗಿದೆ. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ತಯಾರಿಕೆಯಲ್ಲಿ ಸ್ವಾವಲಂಬಿಯಾಗಿದ್ದವರು ಅವುಗಳನ್ನು ಬೇರೆಡೆಯಿಂದ ಖರೀದಿಸುವ ಹಂತಕ್ಕೆ ಬಂದಿದ್ದಾರೆ.
ಈಗಲಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಜಾನುವಾರುಗಳಿಗೆ ಸೂಕ್ತ ನೆರಳು, ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮಾಸಾಂತ್ಯಕ್ಕೆ ಮುನ್ನವೇ ದಯನೀಯ ಸ್ಥಿತಿ ಉಂಟಾಗಲಿದೆ.
-ಸುಭಾಷ ಮಾಳಿ, ರೈತರು, ಪಾರ್ಥನಳ್ಳಿ.