ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಲೆ
ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಸ್ಥಳೀಯ ಕಲಾವಿದರ ಕಲೆ ಮೇಳೈಸಲಿದೆ ...
Vijaya Karnataka 22 Jul 2019, 5:00 am
ಬೆಳಗಾವಿ : ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಸ್ಥಳೀಯ ಕಲಾವಿದರ ಕಲೆ ಮೇಳೈಸಲಿದೆ.
ನಿಲ್ದಾಣದ ಗೋಡೆಗಳು ಕಲಾವಿದರ ಕೌಶಲದಿಂದ ಕಂಗೊಳಿಸಲಿವೆ. ವಿಮಾನಗಳ ಮೂಲಕ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೂ ಬೆಳಗಾವಿಯ ಕಲೆ, ಸಂಸ್ಕೃತಿ ನೋಡುವ ಭಾಗ್ಯ ವಿಮಾನ ನಿಲ್ದಾಣದಲ್ಲಿಯೇ ಒದಗಲಿದೆ. ಇಂಥದ್ದೊಂದು ಪ್ರಯೋಗಕ್ಕೆ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ಮುಂದಾಗಿದ್ದಾರೆ.
ಈ ಸಂಬಂಧ ಬೆಳಗಾವಿಯ ಸ್ಥಳೀಯ ಕಲಾವಿದರನ್ನೊಳಗೊಂಡ 'ಗುಲ್ಮೊಹರ್ ಬ್ಯಾಗ್' ಎನ್ನುವ ಗುಂಪಿನೊಂದಿಗೆ ಶನಿವಾರ ಸಭೆಯನ್ನೂ ನಡೆಸಿದ್ದಾರೆ. ಈ ಯೋಜನೆಗೆ ಕಲಾವಿದರು ಮತ್ತು ನಿಲ್ದಾಣದ ನಿರ್ದೇಶಕರಿಂದ ಸಕಾರಾತ್ಮಕ ಚರ್ಚೆಗಳು ನಡೆದಿದ್ದು, ಸದ್ಯದಲ್ಲಿಯೇ ಕಲಾವಿದರ ಕಲೆಗಳು ವಿಮಾನ ನಿಲ್ದಾಣದಲ್ಲಿ ಪ್ರದರ್ಶನವಾಗಲಿವೆ.
ಚಿತ್ರಕಲೆ ಸೇರಿ ಅವಕಾಶ ಇರುವ ಎಲ್ಲ ರೀತಿಯ ಕರಕುಶಲ ವಸ್ತುಗಳ ಪ್ರದರ್ಶನಕ್ಕೂ ಅವಕಾಶ ನೀಡುವುದಾಗಿ ರಾಜೇಶಕುಮಾರ ಮೌರ್ಯ ತಿಳಿಸಿದ್ದಾರೆ. ಅಲ್ಲದೆ, ಈ ಕಲಾತ್ಮಕ ವಸ್ತುಗಳ ಮಾರಾಟಕ್ಕೆ ನಿಲ್ದಾಣದಲ್ಲಿಯೇ ಅವಕಾಶ ಕೊಡುವ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿದ್ದ ನಾಟಕಕಾರ ಡಿ.ಎಸ್. ಚೌಗುಲೆ ತಿಳಿಸಿದರು.
ಈ ಚರ್ಚೆಯ ಕುರಿತ ವಿಡಿಯೊವೊಂದನ್ನು ರಾಜೇಶಕುಮಾರ ಮೌರ್ಯ ಅವರು ಬೆಳಗಾವಿ ವಿಮಾನ ನಿಲ್ದಾಣದ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಲಾವಿದರ ಅನಿಸಿಕೆಯ ವಿಡಿಯೊಗಳು ಕೂಡ ಅದರಲ್ಲಿವೆ. ನಿರ್ದೇಶಕರ ಈ ನಡೆ ಕಲಾವಿದರಿಗೆ ಸ್ಫೂರ್ತಿ ನೀಡಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ನಿಲ್ದಾಣದ ಗೋಡೆಗಳು ಕಲಾವಿದರ ಕೌಶಲದಿಂದ ಕಂಗೊಳಿಸಲಿವೆ. ವಿಮಾನಗಳ ಮೂಲಕ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೂ ಬೆಳಗಾವಿಯ ಕಲೆ, ಸಂಸ್ಕೃತಿ ನೋಡುವ ಭಾಗ್ಯ ವಿಮಾನ ನಿಲ್ದಾಣದಲ್ಲಿಯೇ ಒದಗಲಿದೆ. ಇಂಥದ್ದೊಂದು ಪ್ರಯೋಗಕ್ಕೆ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ಮುಂದಾಗಿದ್ದಾರೆ.
ಈ ಸಂಬಂಧ ಬೆಳಗಾವಿಯ ಸ್ಥಳೀಯ ಕಲಾವಿದರನ್ನೊಳಗೊಂಡ 'ಗುಲ್ಮೊಹರ್ ಬ್ಯಾಗ್' ಎನ್ನುವ ಗುಂಪಿನೊಂದಿಗೆ ಶನಿವಾರ ಸಭೆಯನ್ನೂ ನಡೆಸಿದ್ದಾರೆ. ಈ ಯೋಜನೆಗೆ ಕಲಾವಿದರು ಮತ್ತು ನಿಲ್ದಾಣದ ನಿರ್ದೇಶಕರಿಂದ ಸಕಾರಾತ್ಮಕ ಚರ್ಚೆಗಳು ನಡೆದಿದ್ದು, ಸದ್ಯದಲ್ಲಿಯೇ ಕಲಾವಿದರ ಕಲೆಗಳು ವಿಮಾನ ನಿಲ್ದಾಣದಲ್ಲಿ ಪ್ರದರ್ಶನವಾಗಲಿವೆ.
ಚಿತ್ರಕಲೆ ಸೇರಿ ಅವಕಾಶ ಇರುವ ಎಲ್ಲ ರೀತಿಯ ಕರಕುಶಲ ವಸ್ತುಗಳ ಪ್ರದರ್ಶನಕ್ಕೂ ಅವಕಾಶ ನೀಡುವುದಾಗಿ ರಾಜೇಶಕುಮಾರ ಮೌರ್ಯ ತಿಳಿಸಿದ್ದಾರೆ. ಅಲ್ಲದೆ, ಈ ಕಲಾತ್ಮಕ ವಸ್ತುಗಳ ಮಾರಾಟಕ್ಕೆ ನಿಲ್ದಾಣದಲ್ಲಿಯೇ ಅವಕಾಶ ಕೊಡುವ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿದ್ದ ನಾಟಕಕಾರ ಡಿ.ಎಸ್. ಚೌಗುಲೆ ತಿಳಿಸಿದರು.
ಈ ಚರ್ಚೆಯ ಕುರಿತ ವಿಡಿಯೊವೊಂದನ್ನು ರಾಜೇಶಕುಮಾರ ಮೌರ್ಯ ಅವರು ಬೆಳಗಾವಿ ವಿಮಾನ ನಿಲ್ದಾಣದ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಲಾವಿದರ ಅನಿಸಿಕೆಯ ವಿಡಿಯೊಗಳು ಕೂಡ ಅದರಲ್ಲಿವೆ. ನಿರ್ದೇಶಕರ ಈ ನಡೆ ಕಲಾವಿದರಿಗೆ ಸ್ಫೂರ್ತಿ ನೀಡಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.