ಆ್ಯಪ್ನಗರ

ಬಾಡಿಗೆ ಕೊಡದ ಮಳಿಗೆಗಳಿಗೆ ಬೀಗ

ಬೆಳಗಾವಿ: ಮಹಾನಗರ ಪಾಲಿಕೆ ಅಧಿಕಾರಿಗಳು ...

Vijaya Karnataka 18 Feb 2020, 5:00 am
ಬೆಳಗಾವಿ: ಮಹಾನಗರ ಪಾಲಿಕೆ ಅಧಿಕಾರಿಗಳು ಬಾಡಿಗೆ ಭರಿಸದ ಎರಡು ವ್ಯಾಪಾರ ಮಳಿಗೆಗಳಿಗೆ ಸೋಮವಾರ ಬೀಗ ಹಾಕಿ ಕ್ರಮ ಕೈಗೊಂಡಿದ್ದಾರೆ. ಪಾಲಿಕೆ ಮಾಜಿ ಸದಸ್ಯ ಲತೀಫ್‌ಖಾನ್‌ ಪಠಾಣ ಅವರ ಪತ್ನಿ ಮತ್ತು ಡಾ.ಇಸಾಕ್‌ ನಿಜಾಮಿ ಎನ್ನುವವರ ಹೆಸರಿನಲ್ಲಿದ್ದ ಎರಡು ಅಂಗಡಿಗಳನ್ನು ಬಂದ್‌ ಮಾಡಿದ ಪಾಲಿಕೆ ಅಧಿಕಾರಿಗಳ ತಂಡ ಬೀಗ ಜಡಿದಿದೆ. ''ಲತೀಫ್‌ಖಾನ್‌ ಪಠಾಣ ಪತ್ನಿ ಹೆಸರಲ್ಲಿನ ಅಂಗಡಿಯಿಂದ 10 ಲಕ್ಷ ರೂ.ಮತ್ತು ಡಾ.ಇಸಾಕ್‌ ಹೆಸರಿನ ಅಂಗಡಿಯಿಂದ 23 ಲಕ್ಷ ರೂ.ಬಾಡಿಗೆ ಬರಬೇಕಿತ್ತು. ಹಲವಾರು ಬಾರಿ ನೋಟಿಸ್‌ ಜಾರಿ ಮಾಡಿದ್ದರೂ ಬಾಡಿಗೆ ಭರಿಸದ ಹಿನ್ನೆಲೆಯಲ್ಲಿಈ ಕ್ರಮ ಕೈಗೊಳ್ಳಲಾಗಿದೆ'', ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ