ಆ್ಯಪ್ನಗರ

ಪರವಾನಗಿ ಇಲ್ಲದ ರಸಗೊಬ್ಬರ ಮಳಿಗೆಗೆ ಬೀಗ

ತೆಲಸಂಗ: ಗ್ರಾಮದಲ್ಲಿಪರವಾನಗಿ ಇಲ್ಲದೇ ನಡೆಸುತ್ತಿದ್ದ ಕೀಟನಾಶಕ ಮತ್ತು ರಸಗೊಬ್ಬರ ...

Vijaya Karnataka 22 Sep 2019, 5:00 am
ತೆಲಸಂಗ: ಗ್ರಾಮದಲ್ಲಿಪರವಾನಗಿ ಇಲ್ಲದೇ ನಡೆಸುತ್ತಿದ್ದ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟ ಮಳಿಗೆಯೊಂದಕ್ಕೆ ಬೀಗ ಜಡಿದ ಅಧಿಕಾರಿಗಳು, ನಿಯಮ ಪಾಲಿಸದೇ ಇರುವ ಮೂರು ಅಂಗಡಿಗಳಿಗೆ ನೋಟಿಸ್‌ ನೀಡಿದ್ದಾರೆ.
Vijaya Karnataka Web 21TELSANG1_53


ಕೃಷಿ ಇಲಾಖೆಯ ಜಾರಿದಳದ ಅಧಿಕಾರಿಗಳು ದಾಳಿ ನಡೆಸಿ,ಸರಕಾರದ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ನಡೆಸುತ್ತಿದ್ದ ಮೂರು ಮಳಿಗೆಗಳಿಗೆ ನೋಟಿಸ್‌ ನೀಡಿ ಕಾನೂನು ಪಾಲಿಸುವಂತೆ ಎಚ್ಚರಿಸಿದರು.

ಲೈಸೆನ್ಸ್‌ ಇಲ್ಲದ ಕೀಟನಾಶಕ ಮಾರಾಟ, ಅನಧಿಕೃತ, ಸರಕಾರ ಪರೀಕ್ಷಿಸದ, ಮಾನ್ಯತೆ ಹೊಂದದ ಜೈವಿಕ ರಸಗೊಬ್ಬರ ಮಾರಾಟ, ದರ ಪಟ್ಟಿ ಲಗತ್ತಿಸದ, ಮಾರಾಟ ದಾಸ್ತಾನು ಸಹಿ ಮತ್ತು ನೋಂದಣಿ ಪುಸ್ತಕ ನಿರ್ವಹಣೆ ಮಾಡದ, ಪೋಸ್‌ ಯಂತ್ರದ ಮೂಲಕ ಬಿಲ್‌ ನೀಡದಿರುವ ಮಳಿಗೆಗಳ ಮಾಲೀಕರಿಗೆ ನೋಟಿಸ್‌ ನೀಡಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಆರ್‌.ಬಿ. ಪಾಟೀಲ, ಜಾರಿದಳದ ಬೆಳಗಾವಿ ಅಧಿಕಾರಿ ಆರ್‌.ಬಿ. ನಾಯಕರ್‌, ಸಹಾಯಕ ಕೃಷಿ ನಿರ್ದೇಶಕ ಸಿ.ಐ. ಹೂಗಾರ, ಅಥಣಿ ಸಹಾಯಕ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ, ತೆಲಸಂಗ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ಮತ್ತಪ್ಪ ಕಡಪಟ್ಟಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ