ಆ್ಯಪ್ನಗರ

ಲೋಕ ಅದಾಲತ್‌; 242 ಪ್ರಕರಣ ಇತ್ಯರ್ಥ, 1.60 ಕೋಟಿ ರೂ. ವಸೂಲಿ

ಖಾನಾಪುರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿಶನಿವಾರ ...

Vijaya Karnataka 15 Sep 2019, 5:00 am
ಖಾನಾಪುರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿಶನಿವಾರ ಲೋಕ ಅದಾಲತ್‌ ಮೂಲಕ ನಡೆದ ರಾಜಿ ಸಂಧಾನದ ವಿವಿಧ ಪ್ರಕರಣಗಳಲ್ಲಿಒಟ್ಟು 1.60 ಕೋಟಿ ರೂ. ಮೊತ್ತವನ್ನು ವಸೂಲಿ ಮಾಡಲಾಗಿದ್ದು, 242 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯವಾದಿ ವಿಜಯ ಹಿರೇಮಠ ತಿಳಿಸಿದ್ದಾರೆ.
Vijaya Karnataka Web lok adalat 242 case settlement rs 1 60 crore recovered
ಲೋಕ ಅದಾಲತ್‌; 242 ಪ್ರಕರಣ ಇತ್ಯರ್ಥ, 1.60 ಕೋಟಿ ರೂ. ವಸೂಲಿ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಖಾನಾಪುರದ ಇತಿಹಾಸದಲ್ಲಿಮೊದಲ ಬಾರಿಗೆ ಇಷ್ಟೊಂದು ಮೊತ್ತ ವಸೂಲಿಯಾಗಿ ಒಂದೇ ಬಾರಿ 242 ಪ್ರಕರಣಗಳು ಇತ್ಯರ್ಥಗೊಂಡಿವೆ. ಇತ್ಯರ್ಥಗೊಂಡ ಪ್ರಕರಣಗಳ ಪೈಕಿ ಬಹುತೇಕ ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿಸದ ಮತ್ತು ಚೆಕ್‌ ಬೌನ್ಸ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಮಡಿವಾಳ ಕಳೆದ ಒಂದೂವರೆ ತಿಂಗಳಿನಿಂದ ಇಂತಹ ಪ್ರಕರಣಗಳ ಇತ್ಯರ್ಥಕ್ಕಾಗಿ ಶ್ರಮಿಸಿದ್ದಾರೆ. ಹಿರಿಯ ನ್ಯಾಯಾಲಯದ ನ್ಯಾಯಾಧೀಶೆ ಕೆ. ವಿದ್ಯಾ ಅವರ ಮಾರ್ಗದರ್ಶನದಲ್ಲಿನಡೆದ ಪ್ರಕರಣಗಳ ವಿಚಾರಣೆಯಲ್ಲಿದೂರುದಾರರು ಮತ್ತು ಎದುರುದಾರರು ಪರಸ್ಪರ ರಾಜಿ ಸಂಧಾನಕ್ಕೆ ಒಪ್ಪಿ ಲೋಕ ಅದಾಲತ್‌ನಲ್ಲಿತಮ್ಮ ದಾವೆಗಳನ್ನು ಇತ್ಯರ್ಥಗೊಳಿಸಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ