ಆ್ಯಪ್ನಗರ

ಪ್ರೇಮ ವೈಫಲ್ಯ: ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ನಿಪ್ಪಾಣಿ ನಗರದ ನಿವಾಸಿ ಶಿವಪ್ರಸಾದ ಪವಾರ್ (20) ಆತ್ಮಹತ್ಯೆ‌ ಮಾಡಿಕೊಂಡಿರುವ ದುರ್ದೈವಿ. ಈತ ಸಿವಿಲ್ ವಿಭಾಗದ ನಾಲ್ಕನೇ ಸೆಮಿಸ್ಟರ್​ನಲ್ಲಿ ವ್ಯಾಸಂಗ ಮಾಡುತ್ತಿದ್ದನು.

Vijaya Karnataka Web 14 Feb 2019, 4:13 pm
ಬೆಳಗಾವಿ: ಪ್ರೇಮ ವೈಫಲ್ಯದಿಂದ ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
Vijaya Karnataka Web suicide


ನಿಪ್ಪಾಣಿ ನಗರದ ನಿವಾಸಿ ಶಿವಪ್ರಸಾದ ಪವಾರ್ (20) ಆತ್ಮಹತ್ಯೆ‌ ಮಾಡಿಕೊಂಡಿರುವ ದುರ್ದೈವಿ. ಈತ ಸಿವಿಲ್ ವಿಭಾಗದ ನಾಲ್ಕನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದನು. ತನ್ನದೇ ವಿಭಾಗದ ಹುಡಗಿಯೊಬ್ಬಳನ್ನು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ ಶಿವಪ್ರಸಾದ ಪ್ರೇಮಿಗಳ ದಿನವಾದ ಇಂದು ಪ್ರಪೋಸ್ ಮಾಡಿದ್ದಾನೆ. ಆದರೆ ಹುಡುಗಿ ಈತನ ಪ್ರೀತಿಗೆ ಒಪ್ಪಿಗೆ ಸೂಚಿಸಿಲ್ಲ.‌ ಇದರಿಂದ ಬೇಸರಗೊಂಡಿರುವ ಶಿವಪ್ರಸಾದ ಕಾಲೇಜಿನ ಮೂರನೇ ಮಹಡಿ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಈತ ಬಿದ್ದಿರುವ ಸದ್ದಿಗೆ ಇತರ ವಿಭಾಗಗಳ ವಿದ್ಯಾರ್ಥಿಗಳು ಹೊರ ಬಂದು, ತಕ್ಷಣವೇ ಆತನನ್ನು ‌ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಿಲ್ಲ. ಸ್ನೇಹಿತನ ಅಗಲಿಕೆಯಿಂದ ಸಹಪಾಠಿಗಳ ಆಕ್ರಂದನ ಮುಗಿಲು ‌ಮುಟ್ಟಿದೆ. ಶಿವಪ್ರಸಾದ ಒಳ್ಳೆಯ ವಿದ್ಯಾರ್ಥಿ ಜತೆಗೆ ಕ್ರೀಡಾಪಟು ಕೂಡ ಆಗಿದ್ದ. ಈತನ ಕುಟುಂಬದ ಪರಿಸ್ಥಿತಿ ಸರಿಯಿರಲಿಲ್ಲ. ಹಣಕಾಸಿನ‌ ಸಮಸ್ಯೆ ಇತ್ತು.‌ ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಿಲ್ಲ ಎನ್ನುತ್ತಾರೆ ಸಹಪಾಠಿಗಳು.

ಈತ ಬೆಳಗಾವಿಯ ಸರ್ಕಾರಿ ವಸತಿ ನಿಲಯದಲ್ಲಿದ್ದುಕೊಂಡು ಪಾಲಿಟೆಕ್ನಿಕ್ ವ್ಯಾಸಾಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಕಾಲೇಜಿಗೆ ಆಗಮಿಸಿರುವ ಶಿವಪ್ರಸಾದ ಮೊದಲ ಕ್ಲಾಸ್ ಅಟೆಂಡ್ ಮಾಡಿದ್ದಾನೆ. ಎರಡನೇ ತರಗತಿ ಆರಂಭಕ್ಕೂ‌ ಮುನ್ನ ಪ್ರಪೋಸ್ ಮಾಡಿದ್ದು, ಪ್ರೀತಿಗೆ ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗುತ್ತದೆ. ಸ್ಥಳಕ್ಕೆ ಖಡೆ ಬಜಾರ್ ಠಾಣೆಯ ಪೊಲೀಸರು ‌ಭೇಟಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ