ಆ್ಯಪ್ನಗರ

ಮಹದಾಯಿ: ಗೋವಾ ಅರ್ಜಿ ವಿಚಾರಣೆ ನಾಳೆ

ಬೆಳಗಾವಿ/ಪಣಜಿ : ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ತೀರ್ಪಿಗೆ ...

Vijaya Karnataka 4 Aug 2019, 5:00 am
ಬೆಳಗಾವಿ/ಪಣಜಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಗೋವಾ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಆ.5ರಂದು ನಡೆಯಲಿದೆ.
Vijaya Karnataka Web mahadayi goa petition hearing tomorrow
ಮಹದಾಯಿ: ಗೋವಾ ಅರ್ಜಿ ವಿಚಾರಣೆ ನಾಳೆ


''ಮಹದಾಯಿ ನ್ಯಾಯಾಧೀಕರಣ ಪೀಠ ನೀಡಿರುವ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರಿನ ವಿರುದ್ಧ ಗೋವಾ ಸರಕಾರ ವಾರದ ಹಿಂದೆಯಷ್ಟೆ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ದಾಖಲಿಸಿತ್ತು. ಕರ್ನಾಟಕ ಕೂಡ ಬೇಡಿಕೆಯಷ್ಟು ನೀರು ಹಂಚಿಕೆಯಾಗಿಲ್ಲ ಎಂದು ಐದು ತಿಂಗಳ ಹಿಂದೆಯೇ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ದಾಖಲಿಸಿದೆ. ಕರ್ನಾಟಕ ದಾಖಲಿಸಿರುವ ಅರ್ಜಿಯ ವಿಚಾರಣೆ ಕೂಡ ಇಷ್ಟರಲ್ಲಿ ನಡೆಯುವ ಸಾಧ್ಯತೆ ಇದೆ'', ಎಂದು ರಾಜ್ಯದ ವಕೀಲರ ತಂಡದ ಸದಸ್ಯ ಎಂ.ಬಿ.ಝಿರಲಿ ಮಾಹಿತಿ ನೀಡಿದ್ದಾರೆ.

ಗೋವಾ ಪರವಾಗಿ ಅರವಿಂದ್‌ ದಾತಾರ ವಕಾಲತ್ತು ನಡೆಸಲಿದ್ದಾರೆ. ಈವರೆಗೆ ಮಹದಾಯಿ ವಿಷಯವಾಗಿ ಕರ್ನಾಟಕ ಪರ ವಕಾಲತ್ತು ನಡೆಸುತ್ತಿದ್ದ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರನ್ನು ಸರಕಾರ ಬದಲಿಸಿರುವುದರಿಂದ ಮುಂದಿನ ವಿಚಾರಣೆಯಲ್ಲಿ ರಾಜ್ಯದ ಪರವಾಗಿ ಯಾರು ವಾದ ಮಂಡಿಸುತ್ತಾರೆ ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

10ರಂದು ಸಭೆ:
ಮಹದಾಯಿ ನದಿ ಯೋಜನೆ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಹೋರಾಟಗಾರರ ಸಭೆಯನ್ನು ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಆ. 10 ರಂದು ಬೆಳಗ್ಗೆ 10-30ಕ್ಕೆ ಕರೆಯಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ಜಿಲ್ಲಾ ಅಧ್ಯಕ್ಷ ದುಂಡಯ್ಯ ಪೂಜಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ