ಆ್ಯಪ್ನಗರ

ಮಹದಾಯಿ ನ್ಯಾಯಾಧಿಕರಣದ ತೀರ್ಪು ಸಮಾಧಾನಕರವಲ್ಲ

ರಾಮದುರ್ಗ: ರೈತ ಪರ ಸಂಘಟನೆಗಳ ಸುದೀರ್ಘ ಹೋರಾಟದ ಫಲವಾಗಿ ಮಹಾದಾಯಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣ ನೀಡಿದ ತೀರ್ಪು ಸಮಾಧಾನ ತಂದಿದೆಯಾದರೂ ...

Vijaya Karnataka 21 Aug 2018, 5:00 am
ರಾಮದುರ್ಗ: ರೈತ ಪರ ಸಂಘಟನೆಗಳ ಸುದೀರ್ಘ ಹೋರಾಟದ ಫಲವಾಗಿ ಮಹಾದಾಯಿ ನೀರು ಹಂಚಿಕೆ ವಿಷಯದಲ್ಲಿ ನ್ಯಾಯಾಧಿಕರಣ ನೀಡಿದ ತೀರ್ಪು ಸಮಾಧಾನ ತಂದಿದೆಯಾದರೂ ನ್ಯಾಯಯುತವಾಗಿ ದೊರೆಯಬೇಕಿದ್ದ ಪ್ರಮಾಣದಲ್ಲಿ ನೀರು ಹಂಚಿಕೆಯಾಗಿಲ್ಲವೆಂದು ಮಹದಾಯಿ ಮಹಾವೇದಿಕೆಯ ಮುಖಂಡ ವೆಂಕಟೇಶ ಹಿರೇರಡ್ಡಿ ಖೇದ ವ್ಯಕ್ತಪಡಿಸಿದರು.
Vijaya Karnataka Web BEL-20RD2


ಸ್ಥಳೀಯ ಪ್ರೆಸ್‌ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ 36.5 ಟಿಎಂಸಿ ನೀರಿನ ಬೇಡಿಕೆ ಇಡಲಾಗಿತ್ತು. ಆದರೆ ಕೇವಲ 13.5 ಟಿಎಂಸಿ ಮಾತ್ರ ಹಂಚಿಕೆ ಮಾಡಿದೆ. ಅದರಲ್ಲಿ 8.5 ಟಿಎಂಸಿ ವಿದ್ಯುತ್‌ ಉತ್ಪಾದನೆ ಹಾಗೂ 5.4 ಟಿಎಂಸಿ ಕುಡಿಯುದಕ್ಕೆಂದು ನ್ಯಾಯಾಧೀಕರಣ ಹಂಚಿಕೆ ಮಾಡಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ನ್ಯಾಯಯುತವಾಗಿ ರಾಜ್ಯಕ್ಕೆ ದೊರೆಬೇಕಿದ್ದ ನೀರು ಹಂಚಿಕೆ ಮಾಡಲು ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.

ರೈತ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಮಹದಾಯಿ ವಿಷಯದಲ್ಲಿ ರಾಜಕೀಯ ಪಕ್ಷ ಗಳ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು. ನೀರು ಹಂಚಿಕೆ ವಿಷಯದಲ್ಲಿ ಮೂರು ಪಕ್ಷ ಗಳ ಶ್ರಮ ಎಳ್ಳಷ್ಟೂ ಇಲ್ಲ. ರೈತರ ಹೋರಾಟ, ಮಾಧ್ಯಮದವರ ಸಹಕಾರದಿಂದ ಜಯ ಸಿಕ್ಕದೆ ಎಂದರು. ಮುಂದಿನ ರೂಪರೇಷೆಗಳ ಬಗ್ಗೆ ಚರ್ಚಿಸಲು ಆ.25 ರಂದು ಇಲ್ಲಿನ ಶ್ರೀನಿವಾಸ ಸಭಾ ಭವನದಲ್ಲಿ ರೈತರ ಸಭೆ ಕರೆಯಲಾಗಿದ್ದು ರೈತರು ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಆರ್‌.ಸಿ.ಪತ್ತೇಪುರ, ಎಚ್‌.ಎಸ್‌.ಪಾಟೀಲ ಮಾತನಾಡಿದರು. ಬಾಳಪ್ಪ ರಡರಟ್ಟಿ, ಡಿ.ಎಫ್‌.ಹಾಜಿ, ಜಬ್ಬಾರ್‌ಸಾಬ್‌ ಸೈಯ್ಯದ್‌, ಎಸ್‌.ಬಿ. ಹುಚ್ಚಣ್ಣವರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ