ಆ್ಯಪ್ನಗರ

ಮಹದಾಯಿ ವಿವಾದ: ಅಧಿಸೂಚನೆ ಜಾರಿಗೆ ತಡೆಯಾಜ್ಞೆ ತರಲು ಮುಂದಾದ ಗೋವಾ

ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಗೋವಾ ಸರಕಾರ ತಡೆನೀಡಲು ಮುಂದಾಗಿದ್ದು, ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಲು ತೀರ್ಮಾನ ತೆಗೆದುಕೊಂಡಿದೆ.

Vijaya Karnataka Web 24 Feb 2020, 10:02 am
ಪಣಜಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಬೇಕೆಂಬ ಸುಪ್ರೀಂ ಕೋರ್ಟ್‌ ಸೂಚನೆಯಿಂದ ಹಿನ್ನಡೆ ಅನುಭವಿಸಿರುವ ಗೋವಾ ಸರಕಾರ, ಈಗ ನ್ಯಾಯಾಧಿಕರಣದ ತೀರ್ಪನ್ನು ಜಾರಿಗೆ ತರಬಾರದು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಲು ಮುಂದಾಗಿದೆ.
Vijaya Karnataka Web Pramod Sawant


''ಈ ಸಂಬಂಧ ಮೂರು ದಿನಗಳಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದೇವೆ'', ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿರುವ ಅವರು, ''ನ್ಯಾಯಾಲಯ ನ್ಯಾಯಾಧಿಕರಣದ ತೀರ್ಪನ್ನು ಅಧಿಸೂಚನೆಗೊಳಿಸಲು ಆದೇಶಿಸಿದ್ದರೂ ಕರ್ನಾಟಕ ಕಳಸಾ ಬಂಡೂರಿ ಯೋಜನೆಯ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆಯಾಜ್ಞೆ ತರಲು ಗೋವಾ ಅರ್ಜಿ ಸಲ್ಲಿಸಲಿದೆ. ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆಯಾದರೂ ಅದು ಜಾರಿಗೆ ಬರಬಾರದು ಎಂದು ನಾವು ಅರ್ಜಿ ಸಲ್ಲಿಸಲಿದ್ದೇವೆ'', ಎಂದರು.

''ಗೋವಾ ರಾಜ್ಯ ಮಹದಾಯಿ ಹೋರಾಟದಲ್ಲಿಸೋತಿಲ್ಲ. ಸರ್ವೋಚ್ಚ ನ್ಯಾಯಾಲಯ ಜುಲೈ ತಿಂಗಳಲ್ಲಿಮೂರು ದಿನ ವಾದ ಮಂಡಿಸಲು ನಮಗೆ ಅವಕಾಶ ನೀಡಿದೆ. ನಾವು ತಜ್ಞರು ಮತ್ತು ಹಿರಿಯ ವಕೀಲರ ಸಲಹೆ ಪಡೆದುಕೊಂಡು ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ. ಮಹದಾಯಿ ವಿಷಯದಲ್ಲಿಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ'', ಎಂದರು.

ಮಹದಾಯಿ : ಸಿಹಿ ವಿತರಿಸಿ ವಿಜಯೋತ್ಸವ

ಸರ್ವೋಚ್ಚ ನ್ಯಾಯಾಲಯದ ಅಂತಿಮ ಆದೇಶ ಬರುವ ಮುನ್ನ ಕರ್ನಾಟಕ ಮಹದಾಯಿ ನದಿಯ ಶೇಕಡಾವಾರು ಪ್ರಮಾಣದ ನೀರನ್ನು ತಿರುಗಿಸಿಕೊಂಡಿದೆ. ಇದನ್ನು ನಾವು ನ್ಯಾಯಾಲಯದ ಗಮನಕ್ಕೆ ತರಲಿದ್ದೇವೆ.
- ಪ್ರಮೋದ್‌ ಸಾವಂತ್‌, ಗೋವಾ ಸಿಎಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ