ಆ್ಯಪ್ನಗರ

ಹಾನಿ ಪರಿಹಾರ ಮಹಾರಾಷ್ಟ್ರ ಭರಿಸಲಿ

ಬೆಳಗಾವಿ: ಜಿಲ್ಲೆಯ ಕೃಷ್ಣಾ ನದಿ ತೀರದ ಪ್ರದೇಶದಲ್ಲಿ ಪ್ರವಾಹದಿಂದ ಉಂಟಾಗಿರುವ ...

Vijaya Karnataka 7 Aug 2019, 5:00 am
ಬೆಳಗಾವಿ : ಜಿಲ್ಲೆಯ ಕೃಷ್ಣಾ ನದಿ ತೀರದ ಪ್ರದೇಶದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಹಾರವನ್ನು ಮಹಾರಾಷ್ಟ್ರ ಸರಕಾರ ಭರಿಸಬೇಕು ಎಂದು ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಠರಾವು ಮಂಡಿಸಿದೆ.
Vijaya Karnataka Web BEL-6 LBS 17


ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ''ಮಹಾರಾಷ್ಟ್ರ ಸರಕಾರ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಜಿಲ್ಲೆಯ ಚಿಕ್ಕೋಡಿ ವಿಭಾಗದಲ್ಲಿ ಪ್ರವಾಹ ಸಂಭವಿಸಿ ಕೋಟ್ಯಂತರ ರೂ. ಬೆಳೆಹಾನಿ, ಜೀವ ಹಾನಿ ಸಂಭವಿಸಿದೆ. ಆದ್ದರಿಂದ ಮಹಾರಾಷ್ಟ್ರ ಸರಕಾರದಿಂದ ಪರಿಹಾರ ಮೊತ್ತ ವಸೂಲಿ ಮಾಡಬೇಕು'', ಎಂದು ಸ್ಥಾಯಿ ಸಮಿತಿ ಸದಸ್ಯರು ಠರಾವು ಮಂಡಿಸಿ ರಾಜ್ಯ ಸರಕಾರಕ್ಕೆ ರವಾನಿಸಿದರು.

''ಬೇಸಿಗೆ ವೇಳೆಯಲ್ಲಿ ಕೊಯ್ನಾ ಜಲಾಶಯದಿಂದ 2 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರಕಾರ ಸೇರಿದಂತೆ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಮನವಿ ಮಾಡಿದ್ದರು. ಆದರೆ, ಮಹಾರಾಷ್ಟ್ರ ಸರಕಾರ ಒಂದು ಹನಿ ನೀರನ್ನೂ ಹರಿಸಲಿಲ್ಲ. ಈಗ ಭಾರಿ ಪ್ರಮಾಣದಲ್ಲಿ ಏಕಾಏಕಿ ನೀರು ಹರಿಸುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ'', ಎಂದು ಸಮಿತಿ ಅಧ್ಯಕ್ಷ ಶಂಕರ ಮಾಡಲಗಿ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಗೋವಿಂದ ಕೊಪ್ಪದ, ''ಜಾನುವಾರುಗಳಿಗೆ ನೀಡುತ್ತಿರುವ ಔಷಧಗಳು ಕಳಪೆಯಾಗಿವೆ. ತಕ್ಷಣ ಎಲ್ಲ ಔಷಧಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ರೈತರಿಂದ ಹಣ ಪಡೆದುಕೊಂಡು ಔಷಧ ನೀಡುವುದನ್ನು ತಕ್ಷಣ ನಿಲ್ಲಿಸಬೇಕು'', ಎಂದು ಒತ್ತಾಯಿಸಿದರು. ''ಮೂಡಲಗಿ ತಾಲೂಕಿನ ಸುಣಧೋಳಿ, ಬೈರನಟ್ಟಿ, ಢವಳೇಶ್ವರ ಸೇರಿದಂತೆ ಅಗತ್ಯವಿರುವ ಕಡೆ ಮೇವು ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ'', ಎಂದು ದೂರಿದರು.

ಸಮಿತಿ ಸದಸ್ಯ ಸಿದ್ದು ಸುಣಗಾರ, ನಿಂಗಪ್ಪ ಅರಕೇರಿ, ಜಿಪಂ ಉಪ ಕಾರ್ಯದರ್ಶಿ ಎಸ್‌.ಬಿ. ಮುಳ್ಳೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ