ಅಥಣಿ: ಬೆಳಗಾವಿ ಕುರಿತು ಮಹಾರಾಷ್ಟ್ರದವರು ಪದೇ ಪದೆ ತಕರಾರು ತೆಗೆಯುವುದನ್ನು ಬಿಡಬೇಕು ಎಂದು ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು. ಪಟ್ಟಣದಲ್ಲಿಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಯಾವುದೇ ಪ್ರದೇಶವೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸ್ಪಷ್ಟ ಪಡಿಸಿದ್ದಾರೆ. ಬೆಳಗಾವಿ ಕರ್ನಾಟಕದ ಆಸ್ತಿ. ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನೆ, ಎಂಇಎಸ್ಗೆ ಈ ಕುರಿತು ತಿಳಿ ಹೇಳಬೇಕು. ಸುಮ್ಮನೇ ಗಲಾಟೆ ಮಾಡಿ ಸೌಹಾರ್ದತೆ ಹಾಳು ಮಾಡಬಾರದು ಎಂದು ಅವರು ಹೇಳಿದರು.
ಮಹಾರಾಷ್ಟ್ರ ‘ಬೆಳಗಾವಿ’ ತಕರಾರು ನಿಲ್ಲಿಸಲಿ
ಬೆಳಗಾವಿ ಕುರಿತು ಮಹಾರಾಷ್ಟ್ರದವರು ಪದೇ ಪದೆ ತಕರಾರು ತೆಗೆಯುವುದನ್ನು ಬಿಡಬೇಕು ಎಂದು ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು...
Vijaya Karnataka 1 Jan 2020, 5:00 am