ಆ್ಯಪ್ನಗರ

ಮೈದುಂಬಿ ಹರಿಯುತ್ತಿರುವ ಮಲಪ್ರಭೆ, ತುಂಬಿದ ತಿಗಡಿ ಹರಿನಾಲಾ

ಬೈಲಹೊಂಗಲ/ಹಣ್ಣಿಕೇರಿ: ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆ ...

Vijaya Karnataka 5 Aug 2019, 5:00 am
ಬೈಲಹೊಂಗಲ/ಹಣ್ಣಿಕೇರಿ: ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆ, ಶ್ರಾವಣ ಮಾಸದ ಆರಂಭ ಹಾಗೂ ಪಂಚಮಿ ಹಬ್ಬಕ್ಕೆ ಹೆಚ್ಚಿನ ಮೆರಗು ತಂದು ಎಲ್ಲರಲ್ಲೂ ಸಂತದ ವಾತಾವರಣ ನಿರ್ಮಾಣ ಮಾಡಿದೆ.
Vijaya Karnataka Web BEL-4HTP1


ಈ ಬಾರಿ ಪಶ್ಚಿಮ ಘಟ್ಟದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಸಮೀಪದ ತಿಗಡಿ ಹರಿನಾಲಾ ಭರ್ತಿಯಾಗಿದೆ. ಮಳೆಗಾಗಿ ಪೂಜೆ, ನಿರಂತರ ಭಜನೆ, ವಾರ ಬಿಡುವುದು, ಜಲದಿಗ್ಭಂಧನ ಹೀಗೆ ಜನರು ಹಾಗೂ ರೈತ ಸಮುದಾಯ ತಮ್ಮ ತಮ್ಮ ನಂಬಿಕೆಗೆ ತಕ್ಕಂತೆ ವ್ರತದ ಮೊರೆ ಹೋಗಿದ್ದರು. ಇನ್ನೇನು ಮಳೆ ಮರೀಚಿಕೆಯಾಗಲಿದೆ ಎನ್ನುವ ಸಂಶಯದ ನಡುವೆಯೇ, ವಾಡಿಕೆಗಿಂತ ಒಂದು ತಿಂಗಳ ನಂತರ ಮುಂಗಾರು ತನ್ನ ಆರ್ಭಟ ತೋರುತ್ತಿದೆ.

ಹಣ್ಣಿಕೇರಿ ವರದಿ: ಕಳೆದ ಎಂಟು ವರ್ಷಗಳಿಂದ ಬರಿದಾಗಿದ್ದ ತಾಲೂಕಿನ ತಿಗಡಿ ಹರಿನಾಲಾ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೋರಹೋಗುತ್ತಿದೆ.

8-10 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹರಿನಾಲಾ ಭರ್ತಿಯಾಗಿದೆ. 2001ರಲ್ಲಿಯೇ ನಾಲಾ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಬರಗಾಲದ ಹಿನ್ನೆಲೆಯಲ್ಲಿ ನೀರನ್ನು ಸಂಗ್ರಹಿಸಲಾಗಿರಲಿಲ್ಲ. 2004ರಲ್ಲಿ ಗರಿಷ್ಠ ಪ್ರಮಾಣದ ನೀರನ್ನು ಸಂಗ್ರಹಿಸಲಾಗಿತ್ತು. ಮಹತ್ವಾಕಾಂಕ್ಷೆಯ ಈ ಯೋಜನೆಗೆ ತಿಗಡಿ, ನಾವಲಗಟ್ಟಿ, ಪುಲಾರಕೊಪ್ಪ, ಚಿಕ್ಕಮೇಳೆ ಗ್ರಾಮಗಳ ಸುಮಾರು ಒಂದು ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಿದ್ದು, ಈ ಯೋಜನೆಯಿಂದ ನಾವಲಗಟ್ಟಿ, ತಿಗಡಿ, ಸಂಪಗಾಂವ, ಜಕನಾಯ್ಕನಕೊಪ್ಪ ಹಣ್ಣಿಕೇರಿ, ಮರಕಟ್ಟಿ, ಹಿರೇಮೇಳೆ ಹೀಗೆ ನಾನಾ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಿದೆ. ಹರಿನಾಲಾದಿಂದ ಅನೇಕ ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ