ಆ್ಯಪ್ನಗರ

ಕಾಮಗಾರಿ ನೆಪದಲ್ಲಿ ಮುಖ್ಯ ರಸ್ತೆಯೇ ಬಂದ್‌

ಬಸವರಾಜ ಕೊಂಡಿ ಹುಕ್ಕೇರಿ ಪಟ್ಟಣದ ಬಸವ ಸರ್ಕಲ್‌ನಿಂದ 3...

Vijaya Karnataka 10 Mar 2019, 5:00 am
ಬಸವರಾಜ ಕೊಂಡಿ ಹುಕ್ಕೇರಿ
Vijaya Karnataka Web BEL-9 HUKKERI 02

ಪಟ್ಟಣದ ಬಸವ ಸರ್ಕಲ್‌ನಿಂದ 3.50 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಹೊಸ ಬಸ್‌ ನಿಲ್ದಾಣದಿಂದ ಬೈಪಾಸ್‌ ರಸ್ತೆಯವರೆಗೆ 3.50 ಕೋಟಿ ಸಿಸಿ ರಸ್ತೆ ಕೆಲಸ ಮತ್ತೆ ಪ್ರಾರಂಭವಾಗಿದೆ.

ಬಸವ ಸರ್ಕದಿಂದ ಹೊಸ ಬಸ್‌ ನಿಲ್ದಾಣದವರೆಗಿನ ಸಿಸಿ ರಸ್ತೆ ಆರೇಳು ತಿಂಗಳಿನಿಂದ ಮಂದಗತಿಯಲ್ಲಿ ಕಾಮಗಾರಿ ಮಾಡಲಾಗುತ್ತಿದ್ದು ಇದು ಪಟ್ಟಣದ ಮುಖ್ಯ ರಸ್ತೆಯಾಗಿರುವುದರಿಂದ ಸಾರ್ವಜನಿಕರ ಸಂಪರ್ಕವಿಲ್ಲದೆ ವ್ಯಾಪಾರಸ್ಥರಿಗೆ ತೊಂದರೆಯಾಗಿತ್ತು. ಇದರಿಂದ ವ್ಯಾಪಾರ ವಹಿವಾಟು ಕುಸಿತವಾಗಿ ಬ್ಯಾಂಕ್‌ ಮೂಲಕ ಸಾಲ ಪಡೆದು ವ್ಯಾಪಾರ ಮಾಡುತ್ತಿರುವವರಿಗೆ ಈ ವರ್ಷ ಮಾರ್ಚ್‌ ತಿಂಗಳಲ್ಲಿ ಸಾಲದ ಬಡ್ಡಿ ಕೂಡ ತೀರಿಸಲಾಗದೆ ಕಂಗಾಲಾಗಿದ್ದಾರೆ.

ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಆಗುವ ಹಾಗೆ ಒಂದು ಬದಿಯಿಂದ ರಸ್ತೆ ಸಂಪೂರ್ಣ ಮುಗಿಸಿ ನಂತರ ಇನ್ನೊಂದು ಬದಿ ಆರಂಭಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ಗುತ್ತಿಗೆದಾರರು ಒಂದೇ ಬಾರಿಗೆ ಎರಡೂ ಬದಿಗೆ ಅಲ್ಲಿಷ್ಟು ಇಲ್ಲಿಷ್ಟು ಕಾಮಗಾರಿ ನಡೆಸಿರುವುದು ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಕಿರಿಕಿರಿಯಾಗಿದೆ. ಸಂಕೇಶ್ವರ ಹಾಗೂ ಹುಕ್ಕೇರಿ ಪಟ್ಟಣಕೆ ಸಿಸಿ ರಸ್ತೆ ಮಾಡುವ ಕಾಮಗಾರಿಗೆ ಒಬ್ಬರೇ ಗುತ್ತಿಗೆದಾರರಿದ್ದು ಕಾಮಗಾರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಸಂಕೇಶ್ವರ ಹಾಗೂ ಹುಕ್ಕೇರಿಯಲ್ಲಿ ಬಳಕೆ ಮಾಡುವುದರಿಂದ ಕೆಲಸದಲ್ಲೂ ವಿಳಂಬವಾಗಿದೆ.

ಸರ್ಕಲ್‌ನಿಂದ ಬಸ್‌ ನಿಲ್ದಾಣದವರಗೆ ರಸ್ತೆ ಕಾಮಗಾರಿ ಮುಕ್ತಾವಾಗುವ ಹಂತದಲ್ಲಿದೆ ಇದನ್ನು ಮುಗಿಸಿ ಬಸ್‌ ಸಂಚಾರ ಪ್ರಾರಂಭಿಸಬೇಕು ಇದರಿಂದ ಎಲ್ಲರಿಗೂ ಅನೂಕೂಲವಾಗಲಿದೆ. ಇಲ್ಲದಿದ್ದರೆ ಮತ್ತೆ 6 ತಿಂಗಳ ಸಾರ್ವಜನಿಕರು ತೊಂದರೆ ಅನುಭವಿಸಿ ಪ್ರತಿಭಟನೆ ಮಾಡುವ ಪರಿಸ್ಥಿತಿಗೆ ಹೋಗುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಮನ ಹರಿಸುವಂತೆ ವ್ಯಾಪಾರಸ್ಥರು, ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಈ ರಸ್ತೆ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ ಕಾಮಗಾರಿ ನೆಪದಲ್ಲಿ ವರ್ಷ ಪೂರ್ತಿ ಸಂಚಾರ ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ. ಕಾಮಗಾರಿ ಶೀಘ್ರ ಮುಗಿಸಿ ಸಾರ್ವಜನಿಕರಿಗೆ ಅನುಕೂಲವಾಗಬೇಕಿದೆ.
-ನ್ಯಾಮತ್‌ ಮೋಮಿನ್‌ ಹುಕ್ಕೇರಿ

ಜನರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ಹಂತ ಹಂತವಾಗಿ ಒಂದುಬದಿಯಿಂದ ರಸ್ತೆ ಮುಗಿಸಿ ಮತ್ತೊಂದು ಬದಿಗೆ ಪ್ರಾರಂಭಿಸುವಂತೆ ಗುತ್ತಿದಾರರಿಗೆ ಸೂಚಿಸಲಾಗುವುದು.
-ವಿ.ಎನ್‌. ಪಾಟೀಲ, ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ