ಆ್ಯಪ್ನಗರ

ಮಕರ ಸಂಕ್ರಾತಿ; ಮಲಪ್ರಭಾ ನದಿ ದಡದಲ್ಲಿ ಸ್ವಚ್ಛತೆ

ಎಂ.ಕೆ.ಹುಬ್ಬಳ್ಳಿ : ಮಕರ ಸಂಕ್ರಮಣದ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಮಲಪ್ರಭಾ ನದಿ ದಡದಲ್ಲಿ ಸ್ವಚ್ಛತೆ ಹಾಗೂ ಸಿದ್ಧತೆ ...

Vijaya Karnataka 10 Jan 2019, 5:00 am
ಎಂ.ಕೆ.ಹುಬ್ಬಳ್ಳಿ : ಮಕರ ಸಂಕ್ರಮಣದ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಮಲಪ್ರಭಾ ನದಿ ದಡದಲ್ಲಿ ಸ್ವಚ್ಛತೆ ಹಾಗೂ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
Vijaya Karnataka Web BEL-09MKH1(1)


ಪ್ರತಿ ವರ್ಷದಂತೆ ಮಕರ ಸಂಕ್ರಮಣ ಆಚರಣೆಗೆ ನದಿ ದಂಡೆಯಲ್ಲಿ ಸೇರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಗಂಗಾಬಿಕೆ ಐಕ್ಯ ಮಂಟಪದಿಂದ ಅಶ್ವತ್ಥ ನರಸಿಂಹ ದೇವಸ್ಥಾನದ ವರೆಗೆ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ವಾಹನ ಹಾಗೂ ಚಕ್ಕಡಿ ನಿಲ್ಲಿಸಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಭಕ್ತರಿಗೆ ನದಿಯಲ್ಲಿ ಸ್ನಾನ ಮಾಡಲು ಅನುಕೂಲವಾಗುವಂತೆ ನದಿ ದಡದಲ್ಲೂ ಸ್ವಚ್ಛತೆ ಕೈಗೊಳ್ಳಲಾಗಿದೆ.

ಪಪಂ ಮುಖ್ಯಾಧಿಕಾರಿ ಸಂತೋಷ ಕುರಬೆಟ್ಟ, ಪಪಂ ಅಧ್ಯಕ್ಷ ಸಿದ್ದಪ್ಪ ಗೋರಕೊಳಿ, ಎಂಜಿನಿಯರ್‌ ರವೀಂದ್ರ ಗಡಾದ, ಸದಸ್ಯರಾದ ಅರೀಫ್‌ ದಫೇದಾರ, ಶ್ರೀಕಾಂತ ಬಸರಗಿ, ಶ್ರೀಕಾಂತ ಸಂಕ್ರೆಣವರ ಸ್ವಚ್ಛತೆ ಕಾರ‍್ಯ ವೀಕ್ಷಿಸಿ ಸೂಕ್ತ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ