ಆ್ಯಪ್ನಗರ

ತಲ್ವಾರ್‌ನಿಂದ ಕೇಕ್‌ ಕಟ್‌ ಮಾಡಿದ ಬಿಜೆಪಿಗ ಅಂದರ್‌

ಬೆಳಗಾವಿ: ಲ್ವಾರ್‌ನಿಂದ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡು ಸಾಕಷ್ಟು ಚರ್ಚೆ, ಆಕ್ಷೇಪಗಳಿಗೆ ಗುರಿಯಾಗಿದ್ದ ಬಿಜೆಪಿ ಕಾರ್ಯಕರ್ತನನ್ನು ಬೆಳಗಾವಿ ನಗರ ...

Vijaya Karnataka 6 Feb 2019, 5:00 am
ಬೆಳಗಾವಿ : ತಲ್ವಾರ್‌ನಿಂದ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡು ಸಾಕಷ್ಟು ಚರ್ಚೆ, ಆಕ್ಷೇಪಗಳಿಗೆ ಗುರಿಯಾಗಿದ್ದ ಬಿಜೆಪಿ ಕಾರ್ಯಕರ್ತನನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web BLG-0502-2-52-NIKHIL MURKUTE


ನಿಯಮಬಾಹಿರ ಮಾರಕಾಸ್ತ್ರಹೊಂದಿರುವ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೋಮವಾರ ರಾತ್ರಿಯೇ ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷ ನಿಖಿಲ್‌ ಮುರಕುಟೆಯನ್ನು ಬಂಧಿಸಿದ್ದಾರೆ. ''ಬಂಧಿತನನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿದೆ'', ಎಂದು ಮಾಳಮಾರುತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?: ಫೆ.1ರಂದು ಇಲ್ಲಿನ ಗಾಂಧಿನಗರದಲ್ಲಿ ನಿಖಿಲ್‌ ಮುರಕುಟೆ ಸ್ನೇಹಿತರೊಡಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಈ ಸಂದರ್ಭದಲ್ಲಿ ತಲ್ವಾರ್‌ನಿಂದ ಕೇಕ್‌ ಕತ್ತರಿಸಿ ಸಂಭ್ರಮಿಸಿದ ಫೋಟೊ ಮತ್ತು ವಿಡಿಯೊ ವೈರಲ್‌ ಆಗಿದ್ದವು. ಕೇಕ್‌ ಕತ್ತರಿಸುವಾಗ ನಗರ ಶಾಸಕ ಅನಿಲ ಬೆನಕೆ ಕೂಡ ಸಾಥ್‌ ನೀಡಿರುವ ಮತ್ತು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ ಕೂಡ ಹುಟ್ಟುಹಬ್ಬದಾಚರಣೆಯಲ್ಲಿ ಭಾಗವಹಿಸಿರುವ ಪೋಟೊ ಸಹ ಚರ್ಚೆಗೆ ಕಾರಣವಾಗಿದ್ದವು.

ಘಟನೆ ಕುರಿತು ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಮಾಜದಲ್ಲಿ ಭಯದ ವಾತಾವರಣ ಮೂಡಿಸಿರುವ ಆರೋಪದಡಿ ಬಂಧಿತ ನಿಖಿಲ್‌ ಮೇಲೆ ಈ ಹಿಂದೆಯೂ ಕೊಲೆ ಯತ್ನ ಸೇರಿದಂತೆ 307 ಹಾಗೂ ಇತರ ಪ್ರಕರಣಗಳು ದಾಖಲಾಗಿವೆ. ಆತನ ಮೇಲೆ ರೌಡಿ ಶೀಟ್‌ ಕೂಡ ತೆರೆಯಲಾಗಿತ್ತು.
- ಎನ್‌.ವಿ. ಭರಮನಿ, ಮಾರ್ಕೆಟ್‌ ಠಾಣೆ ಎಸಿಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ