ಆ್ಯಪ್ನಗರ

ಹಿರೇಬಾಗೇವಾಡಿಯಿಂದ ಬಂದ ವ್ಯಕ್ತಿ ವಶಕ್ಕೆ

ಚನ್ನಮ್ಮನ ಕಿತ್ತೂರು: ರೆಡ್‌ಝೋನ್‌ ಎಂದು ಗುರುತಿಸಿರುವ ...

Vijaya Karnataka 15 Apr 2020, 5:00 am
ಚನ್ನಮ್ಮನ ಕಿತ್ತೂರು: ರೆಡ್‌ಝೋನ್‌ ಎಂದು ಗುರುತಿಸಿರುವ ಹಿರೇಬಾಗೇವಾಡಿಯಿಂದ ಪಟ್ಟಣಕ್ಕೆ ಪ್ರವೇಶಿಸುತ್ತಿದ್ದ ನೂರ್‌ ಮೊಹಮ್ಮದ ಫಕೀರ ಶಾಹೀದ ಎಂಬ ವ್ಯಕ್ತಿಯನ್ನು ಸಮೀಪದ ತಿಮ್ಮಾಪುರ ಗ್ರಾಮದಲ್ಲಿಸ್ಥಳೀಯರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Vijaya Karnataka Web 14KTR1_53
ರಾಜಸ್ಥಾನ ಮೂಲದ ವ್ಯಕ್ತಿಯ ವಿಚಾರಣೆ ಮಾಡುತ್ತಿರುವ ಪೊಲೀಸ್‌ ಅಧಿಕಾರಿಗಳು.


ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ವಿಚಾರಿಸಿ ಆತನ ಬಳಿಯಿದ್ದ ಬ್ಯಾಗ್‌ ತಪಾಸಣೆ ನಡೆಸಿದಾಗ ಆಧಾರ್‌ ಕಾರ್ಡ್‌ನಿಂದ ಆತ ರಾಜಸ್ಥಾನ ಮೂಲದವನು ಎಂದು ತಿಳಿದುಬಂದಿದೆ. ಧಾರವಾಡ ಮತ್ತು ಬೆಳಗಾವಿಯಲ್ಲಿಇರುವ ಕಿರಾಣಿ ಅಂಗಡಿಗೆ ಹೋಗಿದ್ದು, ಬಸ್‌ಗಳು ಬಂದ್‌ ಆಗಿರುವುದರಿಂದ ನಡೆದುಕೊಂಡು ಹೋಗುತ್ತಿದ್ದೇನೆ ಎಂದು ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ