ಆ್ಯಪ್ನಗರ

ಕಾಲುವೆ ನೀರಿನಲ್ಲಿಮುಳುಗಿ ವ್ಯಕ್ತಿ ಸಾವು

ಸುರೇಬಾನ: ಮಲಪ್ರಭಾ ನದಿಯ ಬಲದಂಡೆ ...

Vijaya Karnataka 26 Jan 2020, 5:00 am
ಸುರೇಬಾನ: ಮಲಪ್ರಭಾ ನದಿಯ ಬಲದಂಡೆ ಕಾಲುವೆಯಲ್ಲಿತಮ್ಮನ ಮಗನೊಂದಿಗೆ ಸ್ನಾನ ಮಾಡಲಿಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾರೆ. ಕಾಲುವೆಯಲ್ಲಿಮುಳುಗುತ್ತಿದ್ದ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ. ನಾಮದೇವ ನಾರಾಯಣಪ್ಪ ಕೊಂಗಿ (45) ಮೃತ ವ್ಯಕ್ತಿ. ಇವರ ಸಹೋದರನ ಪುತ್ರ ಕೃಷ್ಣಾ ತುಕಾರಾಮ ಕೊಂಗಿ (11) ಅಪಾಯದಿಂದ ಪಾರಾಗಿದ್ದಾನೆ.
Vijaya Karnataka Web man drowns in canal water
ಕಾಲುವೆ ನೀರಿನಲ್ಲಿಮುಳುಗಿ ವ್ಯಕ್ತಿ ಸಾವು


ಕಾಲುವೆ ನೀರಿನಲ್ಲಿಮುಳುಗುತ್ತಿದ್ದ ಬಾಲಕನನ್ನು ಗಮನಿಸಿದ ಸ್ಥಳೀಯರು ಕಾಲುವೆಯ ಪಕ್ಕದ ರಸ್ತೆಯಲ್ಲಿತೆರಳುತ್ತಿದ್ದ ಪೊಲೀಸರನ್ನು ತಡೆದು ರಕ್ಷಿಸುವಂತೆ ವಿನಂತಿಸಿದ್ದಾರೆ. ಆಗ ಸುರೇಬಾನ ಉಪಪೊಲೀಸ್‌ ಠಾಣೆ ಪೇದೆ ಬಿ.ಬಿ. ತಂಗೋಜಿ ಎಂಬುವರು ಮೈಮೇಲಿನ ಬಟ್ಟೆಯನ್ನು ಗಮನಿಸದೆ ಮಲಪ್ರಭಾ ನದಿಯ ಬಲದಂಡೆ ಕಾಲುವೆಯಲ್ಲಿಜಿಗಿದು ಬಾಲಕನನ್ನು ರಕ್ಷಿಸುವಲ್ಲಿಯಶಸ್ವಿಯಾಗಿದ್ದಾರೆ. ಬಾಲಕನ ಜೀವ ಉಳಿಸಿದ ಪೊಲೀಸ್‌ ಪೇದೆ ತಂಗೋಜಿ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ