ಆ್ಯಪ್ನಗರ

ರಾಯಬಾಗದಲ್ಲಿ ಆಡು ಕಳ್ಳತನಕ್ಕೆ ಪ್ರತಿರೋಧ ತೋರಿದವನನ್ನೇ ಕೊಂದ ಕಳ್ಳರು

ರಾಯಬಾಗ(ಬೆಳಗಾವಿ): ಆಡು ಕಳ್ಳತನಕ್ಕೆ ಬಂದ ಕಳ್ಳರು ...

Vijaya Karnataka 6 Jun 2020, 5:00 am
ರಾಯಬಾಗ(ಬೆಳಗಾವಿ): ಆಡು ಕಳ್ಳತನಕ್ಕೆ ಬಂದ ಕಳ್ಳರು ಪ್ರತಿರೋಧ ಮಾಡಿದ ವ್ಯಕ್ತಿಯೊಬ್ಬರನ್ನು ತೆರೆದ ಬಾವಿ ತಳ್ಳಿ ಕೊಲೆ ಮಾಡಿದ್ದಾರೆ.
Vijaya Karnataka Web man killed for opposing the theft of goats in raibag
ರಾಯಬಾಗದಲ್ಲಿ ಆಡು ಕಳ್ಳತನಕ್ಕೆ ಪ್ರತಿರೋಧ ತೋರಿದವನನ್ನೇ ಕೊಂದ ಕಳ್ಳರು


ತಾಲೂಕಿನ ಭೆಂಡವಾಡ ಗ್ರಾಮದ ತೋಟ ಮನೆಯ ನಿವಾಸಿ ಮುಕುಂದ ರೇವಪ್ಪ ಮೇತ್ರಿ (38) ಮೃತ ವ್ಯಕ್ತಿ.

ಕಳ್ಳರು ಆಡುಗಳನ್ನು ಕಳುವು ಮಾಡುತ್ತಿರುವುದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಮುಕುಂದ ಹಾಗೂ ರಾಘವೇಂದ್ರ ಮೇತ್ರಿ (25) ಸಹೋದರರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಳ್ಳರು ಸಹೋದರರ ಮೇಲೆ ಹಲ್ಲೆಮಾಡಿದ್ದಾರೆ. ಅಲ್ಲದೇ ಅವರನ್ನು 25 ಅಡಿ ಆಳದ ಬಾವಿಗೆ ದೂಡಿ ಪರಾರಿಯಾಗಿದ್ದಾರೆ. ಈ ವೇಳೆ ಮುಕುಂದ ಮೇತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಘವೇಂದ್ರ ಮೇತ್ರಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಬಾಗ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

+

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ