ಆ್ಯಪ್ನಗರ

ಕೌಟುಂಬಿಕ ಕಲಹಕ್ಕೆ ವ್ಯಕ್ತಿ ಕೊಲೆ

ಇಚಲಕರಂಜಿ: ಇಲ್ಲಿನ ಜವಾಹರ ನಗರದಲ್ಲಿ ಸೋಮವಾರ ಕೌಟುಂಬಿಕ ಕಲಹವೊಂದು ವ್ಯಕ್ತಿಯ ಕೊಲೆಯಲ್ಲಿ ಪರ್ಯವಸಾನವಾಗಿದೆ...

Vijaya Karnataka 18 Sep 2018, 5:00 am
ಇಚಲಕರಂಜಿ: ಇಲ್ಲಿನ ಜವಾಹರ ನಗರದಲ್ಲಿ ಸೋಮವಾರ ಕೌಟುಂಬಿಕ ಕಲಹವೊಂದು ವ್ಯಕ್ತಿಯ ಕೊಲೆಯಲ್ಲಿ ಪರ್ಯವಸಾನವಾಗಿದೆ.
Vijaya Karnataka Web man killed in family dispute
ಕೌಟುಂಬಿಕ ಕಲಹಕ್ಕೆ ವ್ಯಕ್ತಿ ಕೊಲೆ


ಧೋಂಡಿರಾಮ ಮಾರುತಿ ರಾವಣ (55) ಮೃತಪಟ್ಟವರು. ಕೊಲೆ ಆರೋಪಿ, ಮೃತ ವ್ಯಕ್ತಿಯ ಅಳಿಯ ಅಜಿತ್‌ ಬಾಳಾಸಾಹೇಬ ಪಾಟೀಲ ಘಟನೆಯ ನಂತರ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಹಲ್ಲೆಗೊಳಗಾದ ಅತ್ತೆ ರಾಧಾ (50) ಹಾಗೂ ಆರೋಪಿ ಪತ್ನಿ ರೂಪಾಲಿ (31) ಸಹ ಗಾಯಗೊಂಡಿದ್ದಾರೆ.

ಘಟನೆಯ ವಿವರ: 10 ವರ್ಷಗಳ ಹಿಂದೆ ಧೋಂಡಿರಾಮರ ಪುತ್ರಿ ರೂಪಾಲಿ ಜತೆ ಅಜಿತ್‌ ಮದುವೆಯಾಗಿದ್ದ. ಇವರಿಗೆ ಐದು ವರ್ಷದ ಮಗಳಿದ್ದಾಳೆ. ವಿವಾಹದ ನಂತರ ಇವರಿಬ್ಬರ ಮಧ್ಯೆ ಸತತ ಜಗಳವಾಗುತ್ತಿತ್ತು. ಭಾನುವಾರ ರಾತ್ರಿ ಮತ್ತೆ ಕಲಹ ಉಂಟಾಗಿ, ವಿಕೋಪಕ್ಕೆ ತಿರುಗಿ ಅಜಿತ್‌ ಹರಿತವಾದ ಆಯುಧದಿಂದ ಮಾವ, ಅತ್ತೆ ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದನೆನ್ನಲಾಗಿದೆ. ಧೋಂಡಿರಾಮ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಅತೀವ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಲಾಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ