ಆ್ಯಪ್ನಗರ

ಪರಿಸರ ನಾಶದಿಂದಾಗುವ ವಿಕೋಪಕ್ಕೆ ಮನುಷ್ಯನೇ ಹೊಣೆ

ಬೆಳಗಾವಿ: ಮನುಷ್ಯ ಇದೇ ರೀತಿ ಪರಿಸರವನ್ನು ಹಾಳು ಮಾಡುತ್ತಿದ್ದರೆ, ಕೊಡಗು, ಉತ್ತರಾಖಂಡದಲ್ಲಾದಂಥ ಪ್ರಕೃತಿ ...

Vijaya Karnataka 15 Oct 2018, 5:00 am
ಬೆಳಗಾವಿ : ಮನುಷ್ಯ ಇದೇ ರೀತಿ ಪರಿಸರವನ್ನು ಹಾಳು ಮಾಡುತ್ತಿದ್ದರೆ, ಕೊಡಗು, ಉತ್ತರಾಖಂಡದಲ್ಲಾದಂಥ ಪ್ರಕೃತಿ ವಿಕೋಪಗಳಿಗೆ ಹೊಣೆಯಾಗುತ್ತಲೇ ಇರುತ್ತಾರೆ ಎಂದು ಸಾಹಿತಿ ಸಿ.ಕೆ. ನಾವಲಗಿ ಹೇಳಿದರು.
Vijaya Karnataka Web BLG-1410-2-52-14PRAMOD9


ಇಲ್ಲಿನ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಾಡಹಬ್ಬ ಉತ್ಸವ ಸಮಿತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಪ್ರಕೃತಿ ವಿಕೋಪದ ಪರಿಣಾಮಗಳು' ಎನ್ನುವ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹೈದರಾಬಾದ್‌, ಕೊಡಗು, ಉತ್ತರಾಖಂಡ, ಜಮ್ಮುಕಾಶ್ಮೀರ ಇನ್ನಿತರ ಪರಿಸರ ವಿನಾಶಕ್ಕೆ ಮನುಷ್ಯ ಕಾರಣರಾಗುತ್ತಿದ್ದಾರೆ. ಇಂಥ ವಿನಾಶದಿಂದ ಮನುಷ್ಯ ಬುದ್ಧಿಶಕ್ತಿ ಮೇಲೆ ದುಷ್ಪಪರಿಣಾಮ ಬೀರುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಯಾರಿಗೂ ಉಳಿಗಾಲವಿಲ್ಲದಂತಾಗುತ್ತದೆ. ಹಾಗಾಗಿ ಪರಿಸರ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.

ಗುರುಬಸವಲಿಂಗ ಸ್ವಾಮೀಜಿ, ಎಚ್‌. ರಾಜಶೇಖರ, ಮೋಹನ ಗುಂಡ್ಲೂರ, ಸಿ.ಕೆ. ಜೋರಾಪುರ, ಪಿ.ಬಿ. ಸ್ವಾಮಿ, ಬಾಳಪ್ಪ ರಾಯಣ್ಣನವರ, ಪ್ರೇಮಾ ಕಾಂಬಳೆ, ಮಹಾಂತೇಶ ಕಂಠಿ, ರಾಜು ಪದ್ಮಣ್ಣವರ, ಬಸವರಾಜ ಜರಳಿ ಮತ್ತಿತರರು ಉಪಸ್ಥಿತರಿದ್ದರು. ಡಾ.ಹೇಮಾ ಸೋನೊಳ್ಳಿ ನಿರೂಪಿಸಿದರು, ಮಹಾತೇಂಶ ಕಂಠಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ