ಆ್ಯಪ್ನಗರ

ಡಿಸಿ ಕಾಂಪೌಂಡ್‌ ಆಸ್ತಿ ದಾಖಲೆಯನ್ನೇ ತಿದ್ದಿ ಅಕ್ರಮ!; ಬೆಳಗಾವಿ ನಗರ ವಾರ್ಡ್‌ ಭೂಮಾಪಕ ಅಮಾನತು

ಬೆಳಗಾವಿ: ಇಲ್ಲಿನ ಸದಾಶಿವ ನಗರದಲ್ಲಿನ 'ಜಿಲ್ಲಾಧಿಕಾರಿ‌ ...

Vijaya Karnataka 31 Jul 2020, 5:00 am
ಬೆಳಗಾವಿ: ಇಲ್ಲಿನ ಸದಾಶಿವ ನಗರದಲ್ಲಿನ 'ಜಿಲ್ಲಾಧಿಕಾರಿ ಕಾಂಪೌಂಡ್‌' ಎಂದು ದಾಖಲಾಗಿರುವ ಸಿಟಿ ಸರ್ವೆ ನಂಬರ್‌ 4866ಎ/19 ಆಸ್ತಿ ದಾಖಲೆ ತಿದ್ದುಪಡಿ ಮಾಡಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲಿಸಿ ಅಕ್ರಮ ಎಸಗಿರುವ ಆರೋಪದ ಮೇಲೆ ವಾರ್ಡ್‌ ಭೂಮಾಪಕ ಪ್ರಶಾಂತ್‌ ಕಟ್ಟಿಮನಿ ಎಂಬುವರನ್ನು ಅಮಾನತುಗೊಳಿಸಲಾಗಿದೆ.
Vijaya Karnataka Web suspended
ಸಾಂದರ್ಭಿಕ


''ಪ್ರಶಾಂತ್‌ ಕಟ್ಟಿಮನಿ 'ಜಿಲ್ಲಾಧಿಕಾರಿ ಕಾಂಪೌಂಡ್‌' ಎಂದಿದ್ದ ನಮೂದುಗಳನ್ನು ಆಸ್ತಿ ಕಾರ್ಡ್‌ನಲ್ಲಿತಿದ್ದುಪಡಿ ಮಾಡಿ, ಹೊಸ ನಂಬರ್‌ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ದಾಖಲಿಸಿ, ಸರಕಾರಿ ಆಸ್ತಿ ದುರ್ಬಳಕೆ ಮಾಡಲು ಸಹಕರಿಸಿರುವುದು ಕಂಡುಬಂದಿದೆ. ಆದ್ದರಿಂದ ಕರ್ತವ್ಯಲೋಪಕ್ಕಾಗಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ'', ಎಂದು ನಗರಮಾಪನ ಉತ್ತರವಲಯ ಭೂ ದಾಖಲೆಗಳ ಜಂಟಿ ನಿರ್ದೇಶಕ ಜಗದೀಶ್‌ ರೂಗಿ ತಿಳಿಸಿದ್ದಾರೆ.

''ಕರ್ನಾಟಕ ಭೂ ಕಂದಾಯ ಅಧಿನಿಯಮ ಪ್ರಕಾರ ಸರಕಾರಿ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದರೆ ಅಂತಹ ನೌಕರರಿಗೆ 3 ವರ್ಷಗಳ ಕಾರಾಗೃಹ ವಾಸ ಮತ್ತು 5 ಲಕ್ಷ ರೂ. ದಂಡ ವಿಧಿಸಬಹುದು. ಖಾಸಗಿ ವ್ಯಕ್ತಿಗಳು ಮತ್ತು ಸರಕಾರಿ ನೌಕರರು ಸರಕಾರಿ ಸ್ವತ್ತುಗಳನ್ನು ಕಬಳಿಸುವ ಉದ್ದೇಶದಿಂದ ಯಾವುದೇ ಕೃತ್ಯ ಎಸಗಿದ್ದಲ್ಲಿಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು'', ಎಂದು ಜಗದೀಶ್‌ ರೂಗಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ