ಆ್ಯಪ್ನಗರ

20 ಜನರ ಪ್ರಾಣ ಉಳಿಸಿ ಹುತಾತ್ಮನಾದ ಬೆಳಗಾವಿ ಯೋಧ

ಗ್ರೆನೇಡ್ ಸ್ಪೋಟಗೊಳ್ಳುವ ಸಂದರ್ಭದಲ್ಲಿ ಗ್ರೆನೇಡ್ ಸಮೇತ ಕಂಟೇನರ್‌ನಿಂದ ಹೊರ ಹಾರುವ ಮೂಲಕ 20 ಜನರ ಜೀವ ಉಳಿಸಿ, ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಉಮೇಶ್ ಹೆಳವರ್.

Vijaya Karnataka Web 21 Oct 2018, 2:23 pm
ಬೆಳಗಾವಿ: ಹ್ಯಾಂಡ್ ಗ್ರೆನೇಡ್ ಸ್ಪೋಟಗೊಳ್ಳುವ ಸಮಯದಲ್ಲಿ ಗ್ರೆನೇಡ್ ಸಮೇತ ಕಂಟೇನರ್‌ನಿಂದ ಹೊರ ಜಿಗಿಯುವ ಮೂಲಕ ಸುಮಾರು 20 ಜನರ ಜೀವ ಕಾಪಾಡಿ, ವೀರ ಯೋಧನೊಬ್ಬ ಹುತಾತ್ಮನಾಗಿರುವ ಘಟನೆ ಶನಿವಾರ ಸಂಜೆ ನಾಗಂಪಾಲ್‌ನಲ್ಲಿ ನಡೆದಿದೆ.
Vijaya Karnataka Web belagavi


ಜಿಲ್ಲೆಯ ಗೋಕಾಕ ಪಟ್ಟಣದ ನಿವಾಸಿಯಾಗಿರುವ ಉಮೇಶ್ ಹೆಳವರ್ (35) ಹುತಾತ್ಮ ಯೋಧರಾಗಿದ್ದು, ಮಣಿಪುರ ರಾಜ್ಯದ ಇಂಫಾಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಗ್ರೆನೇಡ್ ಸ್ಪೋಟಗೊಳ್ಳುವ ಸಂದರ್ಭದಲ್ಲಿ ಗ್ರೆನೇಡ್ ಸಮೇತ ಕಂಟೇನರ್‌ನಿಂದ ಹೊರ ಹಾರುವ ಮೂಲಕ 20 ಜನರ ಜೀವ ಉಳಿಸಿ, ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಉಮೇಶ್ ಹೆಳವರ್.

ವೀರ ಯೋಧನ ಪಾರ್ಥಿವ ಶರೀರ್ ಭಾನುವಾರ ಗೋಕಾಕ ಪಟ್ಟಣಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಯೋಧನ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ