ಆ್ಯಪ್ನಗರ

ಹಾರೂಗೇರಿಯಲ್ಲಿ ಬೇವು-ಅಶ್ವತ್ಥ ಮರಕ್ಕೆ ಕಂಕಣಭಾಗ್ಯ

ಹಾರೂಗೇರಿ: ಬೇವಿನ ಮರ ಹಾಗೂ ಅಶ್ವತ್ಥ (ಅರಳಿ) ಈ ಎರಡೂ ಮರಗಳೂ ಒಂದೇ ಬೇರಿನಲ್ಲಿ ಸಂಗಮವಾಗಿದ್ದು, ಅವು ಬೆಳೆದಂತೆ ಒಂದು ಕಡೆ ಬೇವು ಹಾಗೂ ಇನ್ನೊಂದೆಡೆ ಅಶ್ವತ್ಥ ...

Vijaya Karnataka 9 Sep 2018, 5:00 am
ಹಾರೂಗೇರಿ: ಬೇವಿನ ಮರ ಹಾಗೂ ಅಶ್ವತ್ಥ (ಅರಳಿ) ಈ ಎರಡೂ ಮರಗಳೂ ಒಂದೇ ಬೇರಿನಲ್ಲಿ ಸಂಗಮವಾಗಿದ್ದು, ಅವು ಬೆಳೆದಂತೆ ಒಂದು ಕಡೆ ಬೇವು ಹಾಗೂ ಇನ್ನೊಂದೆಡೆ ಅಶ್ವತ್ಥ ಮರ. ಹೀಗೆ ಒಟ್ಟೊಟ್ಟಿಗೆ ಬೆಳೆದು ಎರಡೂ ಮರಗಳು ಒಂದೇ ದೇಹ ಹಾಗೂ ಬೇರೆ ಬೇರೆ ರೆಂಬೆ ಕೊಂಬೆಗಳನ್ನು ಹೊಂದಿವೆ. ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ಒಂದಾಗಿರುವ ಈ ಜೋಡಿ ಮರಗಳಿಗೆ ಶುಕ್ರವಾರ ರಾತ್ರಿ ನೂರಾರು ಮಹಿಳೆಯರು ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು.
Vijaya Karnataka Web BEL-8ARAKERI-2


ಬೇವಿನ ಮರಕ್ಕೆ ಮುತ್ತೈದೆಯರು ಸೀರೆ, ಅರಿಶಿಣ, ಕುಂಕುಮ, ಹಸಿರು ಬಳೆ, ಕಾಲುಂಗುರ ತೊಡಿಸಿದರು. ಅಶ್ವತ್ಥ (ಅರಳಿ) ಮರಕ್ಕೆ ಬಿಳಿ ಲುಂಗಿ, ಟೋಪಿ, ಧೋತಿ ತೋಡಿಸಿ ತಳಿರು ತೋರಣ ಮತ್ತು ವಿದ್ಯುತ್‌ ದೀಪಗಳಿಂದ ಶೃಂಗರಿಸಲಾಗಿತ್ತು. ಮಂತ್ರ ಪಠಿಸಿ, ಅಕ್ಷತೆ ಹಾಕಿ , ಮಾಂಗಲ್ಯ ಧಾರಣೆ ಮಾಡಲಾಯಿತು. ನಾಗಯ್ಯ ಹಿರೇಮಠ, ಗಂಗಾಧರಯ್ಯ ಹಿರೇಮಠಸ್ವಾಮಿಗಳು ಪೂಜೆ ನೇರವೇರಿಸಿದರು. ಅಕ್ಕನ ಬಳಗದ ಶರಣೆಯರು ಸೋಬಾನ ಗೀತೆಗಳನ್ನು ಹಾಡಿದರು.

ಬಸಗೌಡ ಪಾಟೀಲ, ವಿ.ಎಚ್‌.ಪವಾರ, ಡಾ.ವಿ.ಎಸ್‌.ಮಾಳಿ, ಶಂಕರ ಮಾನಶೆಟ್ಟಿ, ಸಿದ್ದಪ್ಪ ಟರ್ಕಿ, ದಾನಯ್ಯಾ ಮಠಪತಿ, ಸದಾಶಿವ ಗೆಜ್ಜಿ, ವಿಠ್ಠಲ ಚಿಂಚಲಿ, ಈರಯ್ಯ ಹಿರೇಮಠ, ಪಂಚಾಕ್ಷರಿ ಹಿರೇಮಠ, ಶಿವಾನಂದ ಮಠಪತಿ, ಕಲ್ಲಯ್ಯ ಮಠಪತಿ, ಮಹಾದೇವಿ ಕಬ್ಬೂರ, ಮಹಾನಂದಾ ಮಠಪತಿ, ಅಕ್ಷತಾ ಅರಕೇರಿ, ಗಂಗವ್ವ ಸದಲಗಿ, ಸುವರ್ಣಾ ಮಠಪತಿ, ಶೈಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ