ಆ್ಯಪ್ನಗರ

ವೀರಯೋಧ ಬಸವರಾಜ ಉಪಾಸೆ ಪುತ್ಥಳಿ ಅನಾವರಣ

ಚಿಕ್ಕೋಡಿ: ದೇಶದ ವಿಷಯ ಬಂದಾಗ ಎಲ್ಲರಲ್ಲಿಯೂ ಭಕ್ತಿಯ ಭಾವ ಮೂಡಬೇಕು...

Vijaya Karnataka 28 Aug 2018, 5:00 am
ಚಿಕ್ಕೋಡಿ: ದೇಶದ ವಿಷಯ ಬಂದಾಗ ಎಲ್ಲರಲ್ಲಿಯೂ ಭಕ್ತಿಯ ಭಾವ ಮೂಡಬೇಕು. ದೇಶ ಕಟ್ಟುವಲ್ಲಿ ಯುವಕರು ಹೆಚ್ಚಿನ ಶ್ರಮವಹಿಸಿ ಸೈನಿಕರಾಗಬೇಕೆಂಬ ಛಲ ಬೆಳೆಸಿಕೊಳ್ಳಬೇಕು ಎಂದು ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ಹೇಳಿದರು.
Vijaya Karnataka Web BEL-27 KAROSHI 1 JPG


ತಾಲೂಕಿನ ಕರೋಶಿ ಗ್ರಾಮದಲ್ಲಿ ವೀರಯೋಧ ಬಸವರಾಜ ಉಪಾಸೆ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ಮನೆಗೊಬ್ಬರು ಸೈನಿಕರಾಗಬೇಕೆಂಬ ದೃಢ ಸಂಕಲ್ಪ ಹೊಂದಬೇಕು. ಚಿಕ್ಕ ವಯಸ್ಸಿನಲ್ಲಿಯೇ ದೇಶ ಪ್ರೇಮ ಹಾಗೂ ಸೈನಿಕ ಬಗ್ಗೆ ಅಭಿಮಾನ ಹೆಚ್ಚಿಸುವ ಕಾರ್ಯವಾಗಬೇಕು. ಕಳೆದ ವರ್ಷದ ರಾಜಸ್ಥಾನದ ಸೂರತ್‌ಗಡದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾಗ ಬಸವರಾಜ ಉಪಾಸೆ ಹುತಾತ್ಮರಾಗಿದ್ದರು ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ವೀರಮರಣ ಹೊಂದಿರುವ ಬಸವರಾಜ ಉಪಾಸೆ ಕುಟುಂಬದ ಜತೆ ಇಡೀ ಕರೋಶಿ ಗ್ರಾಮಸ್ಥರು ಸದಾ ಇರುತ್ತಾರೆ. ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಭರ್ತಿಯಾಗಿ ದೇಶ ಸೇವೆಯಲ್ಲಿ ತೊಡಗಬೇಕು ಎಂದರು.

ಕಮತೇನಹಟ್ಟಿಯ ಗುರುದೇವ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜಯ ಕಾಂಬಳೆ, ವೀರಯೋಧ ಬಸವರಾಜ ಉಪಾಸೆ ಪತ್ನಿ ವಿದ್ಯಾ, ಮಗಳು ಸಮನ್ವಿ, ಸಹೋದರ ವಿನಾಯಕ, ತಂದೆ ಗುರುಸಿದ್ಧ, ತಾಯಿ ಸುವರ್ಣ, ವಿಜಯ ಕೋಠಿವಾಲೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ