ಆ್ಯಪ್ನಗರ

ಆರ್ಥಿಕ ಹೊರೆ ತಗ್ಗಿಸಲು ಸಾಮೂಹಿಕ ವಿವಾಹ ನಡೆಯಲಿ

ಹುಕ್ಕೇರಿ : ಮದುವೆಗಳು ಆರ್ಥಿಕ ಹೊರೆಯಾಗಬಾರದು...

Vijaya Karnataka 8 May 2019, 5:00 am
ಹುಕ್ಕೇರಿ : ಮದುವೆಗಳು ಆರ್ಥಿಕ ಹೊರೆಯಾಗಬಾರದು. ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ನಡೆಯಬೇಕು ಎಂದು ಯರನಾಳ ಕಾಳಿಕಾ ದೇವಸ್ಥಾನದ ಗುರುಬ್ರಹ್ಮಾನಂದ ಸ್ವಾಮಿಗಳು ಹೇಳಿದರು.
Vijaya Karnataka Web BEL-7 HUKKERI01


ಅವರು ಯರನಾಳ ಮಠದಲ್ಲಿ ಶಿವಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಬಡವರು ಸಾಲ ಮಾಡಿ ಆಡಂಬರದಿಂದ ಮಕ್ಕಳ ಮದುವೆ ಮಾಡುವುದು ಕಷ್ಟಕರ. ಕಾರಣ ಸಾಮೂಹಿಕ ವಿವಾಹಗಳಿಂದ ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವುದರ ಜತೆಗೆ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದರು.

ಶ್ರೀಮಠದಿಂದ ಸಾಮೂಹಿಕ ವಿವಾಹದಲ್ಲಿ 6 ಜೋಡಿ ನವ ದಂಪತಿಗೆ ತಾಳಿ, ಬಟ್ಟೆ, ನೀಡಲಾಯಿತು. ನಂತರ ಅನ್ನ ದಾಸೋಹ ನಡೆಯಿತು.

ಬಸವಜಯಂತಿ:
ಶ್ರೀ ಮಠದಲ್ಲಿ ಬಸವಜಯಂತಿಯ ನಿಮಿತ್ತ ಬೆಳಗ್ಗೆ ಬಸವ ಮೂರ್ತಿಗೆ ಅಭಿಷೇಕ ಜರುಗಿತು. ಲಿಂಗಾದೀಕ್ಷಾ ಕಾರ್ಯಕ್ರಮ ಜರುಗಿತು. ಪಲ್ಲಕ್ಕಿ ಉತ್ಸವ ಭಾವಚಿತ್ರದ ಮೆರವಣಿಗೆ ನಡೆಯಿತು. ಮುಖಂಡರಾದ ವಿಜಯ ಭಾಸ್ಕರ, ಆನಂದ ಹೊಸಮನಿ, ಮುಕುಂದ ಮಠದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ