ಆ್ಯಪ್ನಗರ

ಹಳದಿ ಬಣ್ಣಕ್ಕೆ ತಿರುಗಿದ ಗೋವಿನ ಜೋಳ

ಬಸವರಾಜ ಕೊಂಡಿ ಹುಕ್ಕೇರಿ: ತಾಲೂಕಿನಲ್ಲಿ ಹಲವಾರು ದಿನಗಳಿಂದ ನಿರಂತರವಾಗಿ ...

Vijaya Karnataka 2 Aug 2019, 5:00 am
ಬಸವರಾಜ ಕೊಂಡಿ ಹುಕ್ಕೇರಿ
Vijaya Karnataka Web BEL-1 HUKKERI 01

ತಾಲೂಕಿನಲ್ಲಿ ಹಲವಾರು ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಬೆಳೆಗಳ ಬೇರು ಗಟ್ಟಿಯಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತರು ಆತಂಕ್ಕೊಳಗಾಗಿದ್ದಾರೆ. ಜೂನ್‌ ತಿಂಗಳಿನಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ರೈತರು ಸೋಯಾಬಿನ್‌, ಗೋವಿನ ಜೋಳ, ಶೇಂಗಾ, ಜೋಳದ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. ಆದರೆ, ಕೆಲವೆಡೆ ಬೀಜ ಮೊಳಕೆಯೊಡಿದಿದ್ದು, ಜಿಟಿಜಿಟಿ ಮಳೆಯಿಂದ ಮೇಲಕ್ಕೆ ಏಳುತ್ತಿಲ್ಲ. ಅಲ್ಲದೆ, ಬೆಳೆಗಿಂತ ಕಳೆ ಪ್ರಮಾಣ ಜಾಸ್ತಿಯಾಗಿದೆ.

ಕೆಲವೆಡೆ ನೀರಾವರಿ ಪ್ರದೇಶದ ಜಮೀನಿನಲ್ಲಿರುವ ಗೋವಿನ ಜೋಳ ಹಳದಿ ಬಣ್ಣಕ್ಕೆ ತಿರುಗಿದರೆ, ಇನ್ನೂ ಕೆಲವೆಡೆ ರಸವತ್ತಾದ ದಾಂಡ ಬೆಳೆದು ಕಳಚಿ ನೆಲಕ್ಕೆ ಕ್ಕೆಉರುಳುತ್ತಿದೆ.

ಸೋಯಾಬಿನ್‌ಗೆ ಕೀಟ ಬಾಧೆ: ಸೋಯಾಬಿನ್‌ ಬೆಳೆ ಫಲವತ್ತಾಗಿ ಬೆಳೆಯುತ್ತಿದ್ದರೂ ಕೀಟಗಳ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಇದನ್ನು ಹತೋಟಿಗೆ ತರಲು ಸಿಂಪಡಿಸಿದ ಔಷಧ ಜಿಟಿಜಿಟಿ ಮಳೆಯಿಂದ ತೊಳೆದು ಹೋಗುತ್ತಿದೆ.

ಸೋಯಾಬಿನ್‌ ಬೆಳೆ ಹೊರತುಪಡಿಸಿದ್ದರೆ ಗೋವಿನ ಜೋಳಕ್ಕೆ ಉತ್ತಮ ದರವಿದೆ. ಹಾಗಾಗಿ ರೈತರು ಗೋವಿನ ಜೋಳವನ್ನು ಹೆಚ್ಚು ಬಿತ್ತನೆ ಮಾಡಿದ್ದಾರೆ. ಆದರೆ, ಜಿಟಿಜಿಟಿ ಮಳೆಯಿಂದ ಗೋವಿನ ಜೋಳದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕಪಡುತ್ತಿದ್ದಾರೆ.

ಜಿಟಿಜಿಟಿ ಮಳೆಯಿಂದ ಸೋಯಾಬಿನ್‌ಗೆ ಕೀಟ ಬಾಧೆ ಹೆಚ್ಚಾಗಿದೆ. ಜತೆಗೆ ಗೋವಿನ ಜೋಳ ಕೂಡ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಮಳೆ ಹೀಗೇ ಮುಂದುವರಿದರೆ ಗೋವಿನ ಜೋಳದ ಬೆಳೆ ರೈತರ ಕೈಗೆ ಬರುವುದು ಅಸಾಧ್ಯ.
-ಮಹಾದೇವ ಹಾಲಟ್ಟಿ , ರೈತ

ಈಗ ಸುರಿಯುತ್ತಿರುವ ಮಳೆಯಿಂದ ಬೆಳೆಗಳಿಗೆ ಯಾವುದೇ ಹಾನಿ ಇಲ್ಲ. ಮಳೆ ನಿಂತು ಬಿಸಿಲು ಬಿದ್ದರೆ ಬೆಳೆಗಳು ಚೇತರಿಸಿಕೊಳ್ಳುತ್ತವೆ. ರೈತರು ಆತಂಕ ಪಡುವ ಅಗತ್ಯವಿಲ್ಲ.
- ಎಂ. ಎಸ್‌. ಪಟಗುಂದಿ, ಸಹಾಯಕ ಕೃಷಿ ನಿರ್ದೇಶಕರು, ಹುಕ್ಕೇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ