ಆ್ಯಪ್ನಗರ

ಬೆಳಗಾವಿ ಅಭಿವೃದ್ಧಿ ಕುರಿತು ಸಭೆ

ಬೆಳಗಾವಿ: ಮಾಜಿ ನಗರಸೇವಕರು ಇಲ್ಲಿನ ...

Vijaya Karnataka 22 Nov 2019, 5:00 am
ಬೆಳಗಾವಿ: ಮಾಜಿ ನಗರಸೇವಕರು ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸಭೆ ನಡೆಸಿ ಪಾಲಿಕೆಯ ಪ್ರಚಲಿತ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಿದರು.
Vijaya Karnataka Web 21RAJU-5084500
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿಮಾಜಿ ನಗರಸೇವಕರ ಸಭೆ ಜರುಗಿತು.


ಮಾಜಿ ಮಹಾಪೌರ ಸಿದ್ಧನಗೌಡ ಪಾಟೀಲ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿಮಾಜಿ ಶಾಸಕ ರಮೇಶ ಕುಡಚಿ ಉಪಸ್ಥಿತರಿದ್ದರು.

ಮಾಜಿ ಮಹಾಪೌರ ಶಿವಾಜಿ ಸುಂಠಕರ್‌ ಮಾತನಾಡಿ, ಪಾಲಿಕೆ ಸದ್ಯ ಆಡಳಿತಾಧಿಕಾರಿಗಳ ಕೈಯಲ್ಲಿದೆ. ನಿರೀಕ್ಷಿತ ರೀತಿಯಲ್ಲಿಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸ್ಮಾರ್ಟ್‌ ಸಿಟಿ ಕೆಲಸದ್ದೂ ಇದೇ ಆಗಿದೆ. ಅನಧಿಕೃತ ಕಟ್ಟಡಗಳು ಹೆಚ್ಚುತ್ತಿವೆ. ಕಟ್ಟಡ ಪರವಾನಗೆ ನೀಡುವಲ್ಲಿಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಮಹಾಪೌರ ಎನ್‌.ಬಿ. ನಿರ್ವಾಣಿ, ಸಂಜಯ ಪ್ರಭು, ರಣಜೀತ ಪಾಟೀಲ, ವರ್ಷಾ ಅಜರೇಕರ್‌ ಅಭಿಪ್ರಾಯಗಳನ್ನು ತಿಳಿಸಿದರು. ಸಾಧಿಕ್‌ ಇನಾಮದಾರ ಮಾಜಿ ನಗರಸೇವಕರ ಕಮಿಟಿಯ ಸಭೆಗಳಲ್ಲಿಎಲ್ಲಮಾಜಿ ನಗರಸೇವಕರು ಭಾಗವಹಿಸಬೇಕೆಂದು ಕೋರಿದರು. ಶಾಂತಿನಾಥ ಬುಡವಿ, ನೀಲಿಮಾ ಪಾವಸೆ, ಮಾಜಿ ಮಹಾಪೌರ ಕಿರಣ ಸಾಯನಾಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ