ಆ್ಯಪ್ನಗರ

ಸ್ಥಳೀಯ ಆಡಳಿತ ಸಂಸ್ಥೆ ಚುನಾವಣೆಗಾಗಿ ಸದಸ್ಯತ್ವ ಅಭಿಯಾನ

ರಾಮದುರ್ಗ: ಭಾರತೀಯ ಜನತಾ ಪಾರ್ಟಿಯನ್ನು ಬೇರುಮಟ್ಟದಿಂದ ...

Vijaya Karnataka 8 Jul 2019, 5:00 am
ರಾಮದುರ್ಗ: ಭಾರತೀಯ ಜನತಾ ಪಾರ್ಟಿಯನ್ನು ಬೇರುಮಟ್ಟದಿಂದ ಸಂಘಟಿಸಿ ಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಲು ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದ್ದು, ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.
Vijaya Karnataka Web BEL-07RD3


ಪಟ್ಟಣದ ಮರಾಠಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ ವಿಧಾನಸಭಾ ಕ್ಷೇತ್ರದಿಂದ ಐವತ್ತು ಸಾವಿರ ಸದಸ್ಯರನ್ನು ನೋಂದಾಯಿಸಲಾಗಿತ್ತು, ಈ ಬಾರಿ ಇನ್ನೂ ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಲು ಎಲ್ಲ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ಮಂಡಲ ಉಸ್ತುವಾರಿ ಗುರುಪಾದ ಕಳ್ಳಿ ಮಾತನಾಡಿ, ಪಕ್ಷ ದ ರಾಷ್ಟ್ರಾಧ್ಯಕ್ಷ ರ ಆದೇಶದಂತೆ ಜು. 6ರಿಂದ 11ರವರೆಗೆ ಸದಸ್ಯತ್ವದ ಅಭಿಯಾನ ನಡೆಸಬೇಕು. ಪ್ರತಿ ಬೂತ್‌ದಿಂದ ಕನಿಷ್ಠ 25 ಸದಸ್ಯರನ್ನು ನೋಂದಾಯಿಸುವ ಗುರಿ ಇಟ್ಟುಕೊಂಡು ಎಲ್ಲರೂ ಒಂದಾಗಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಮಲ್ಲಣ್ಣ ಯಾದವಾಡ, ಮಹಾದೇವ ಚಿನ್ನಾಕಟ್ಟಿ ಮತ್ತು ಗೋಪಾಲ ಪಾತಾಳಿ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದರು. ರೇಖಾ ಚಿನ್ನಾಕಟ್ಟಿ, ಶಿವಕ್ಕ ಬೆಳವಡಿ, ಮಾರುತಿ ತುಪ್ಪದ, ರೇಣಪ್ಪ ಸೋಮಗೊಂಡ, ಮಾರುತಿ ಕೊಪ್ಪದ, ಶಿವಪ್ಪ ಮೇಟಿ, ಶಶಿಧರ ಮಾಳವಾಡ, ಸೋಮನಾಥ ಧೂತ, ರಾಜೇಶ ಬೀಳಗಿ ಉಪಸ್ಥಿತರಿದ್ದರು. ಸಿದ್ದು ಮೇತ್ರಿ ಸ್ವಾಗತಿಸಿದರು. ವಿಜಯ ನಾಯಕ ನಿರೂಪಿಸಿದರು. ವಿಜಯ ಗುಡದಾರೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ