ಆ್ಯಪ್ನಗರ

ಗಣೇಶೋತ್ಸವಕ್ಕೆ ಸೌಕರ‍್ಯ ಕಲ್ಪಿಸಿ

ಬೆಳಗಾವಿ: ಅದ್ಧೂರಿ ಮತ್ತು ಸಡಗರದಿಂದ ಆಚರಣೆಗೊಳ್ಳುವ ಬೆಳಗಾವಿ ಸಾರ್ವಜನಿಕ ...

Vijaya Karnataka 24 Jul 2019, 5:00 am
ಬೆಳಗಾವಿ : ಅದ್ಧೂರಿ ಮತ್ತು ಸಡಗರದಿಂದ ಆಚರಣೆಗೊಳ್ಳುವ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮಹಾನಗರ ಪಾಲಿಕೆ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಶಹಾಪುರದ ಶ್ರೀ ಲೋಕಮಾನ್ಯ ಟಿಳಕ ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು ಮಂಗಳವಾರ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BLG-2307-2-52-23RAJU-1


ಗಣೇಶೋತ್ಸವ ಸೆ.2ರಿಂದ ಎರಡು ವಾರಗಳ ಕಾಲ ನಡೆಯುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನ ಗಣೇಶ ಮೂರ್ತಿಗಳ ವೀಕ್ಷಣೆಗೆ ನಗರಕ್ಕೆ ಆಗಮಿಸುತ್ತಾರೆ. ಸೂಕ್ತ ರಸ್ತೆ, ಕುಡಿಯುವ ನೀರು, ಪಾರ್ಕಿಂಗ್‌, ಸುಗಮ ಸಂಚಾರ, ಭದ್ರತೆ ಒಳಗೊಂಡು ಇತರೆ ಅನುಕೂಲ ಕಲ್ಪಿಸಿಕೊಡಬೇಕು.

ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಮಾರ್ಗದಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಬೀದಿ ದೀಪ, ರಸ್ತೆ, ಸಾರ್ವಜನಿಕ ಶೌಚಾಲಯ, ಬಸ್‌ಸೇವೆ, ಅಪಾಯಕಾರಿ ವಿದ್ಯುತ್‌ ತಂತಿಗಳ ತೆರವು ಹಾಗೂ ಇತರೆ ಕೆಲಸಗಳನ್ನು ಮಾಡಬೇಕು. ವೀಕ್ಷಣೆಗೆ ಬರುವವರಿಗಾಗಿ ತಡರಾತ್ರಿವರೆಗೆ ಬಸ್‌ ಮತ್ತು ಹೋಟೆಲ್‌ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.

ವಿಜಯ ಜಾಧವ, ಗಿರೀಶ ದೊಂಗಡಿ, ನಿತಿನ್‌ ಬಾತಕಾಂಡೆ, ಹೇಮಂತ ಹಾವೇಲ್‌, ಸುನಿಲ್‌ ಜಾಧವ್‌, ನಿತಿನ್‌ ಜಾಧವ್‌, ಗಜಾನನ ದೇವರಮನಿ ಹಾಗೂ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ