ಆ್ಯಪ್ನಗರ

ನಾನಾ ಬೇಡಿಕೆಗಳ ಈಡೇರಿಕೆಗೆ ಶಿಕ್ಷಕರ ಸಂಘದ ಒತ್ತಾಯ

ಚಿಕ್ಕೋಡಿ: ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷ ಕರಿಗೆ ಪ್ರೌಢ ಶಾಲಾ ಸಹ ಶಿಕ್ಷ ಕರ ಹುದ್ದೆಗಳಿಗೆ ಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ...

Vijaya Karnataka 21 Sep 2018, 5:00 am
ಚಿಕ್ಕೋಡಿ: ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷ ಕರಿಗೆ ಪ್ರೌಢ ಶಾಲಾ ಸಹ ಶಿಕ್ಷ ಕರ ಹುದ್ದೆಗಳಿಗೆ ಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಡಿಡಿಪಿಐ ಎಂ.ಜಿ.ದಾಸರ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-20CKD5


2018-19ನೇ ಸಾಲಿನ ಗಳಿಕೆ ರಜೆ ನಗದೀಕರಣ ನೀಡುವಂತೆ ಎಲ್ಲ ವಲಯ ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಗೆ ಸೂಚಿಸಬೇಕು. 6ನೇ ಪರಿಷ್ಕೃತ ವೇತನ ನೀಡುತ್ತಿದ್ದು, ಬಾಕಿ ಉಳಿದ ಎರಡು ತಿಂಗಳ ವ್ಯತ್ಯಾಸ ಹಣವನ್ನು ಶೀಘ್ರ ಶಿಕ್ಷ ಕರಿಗೆ ನೀಡುವಂತೆ ಬಿಇಒಗಳಿಗೆ ಸೂಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಸೇವಾ ಪುಸ್ತಕದಲ್ಲಿ ಎಲ್ಲ ರೀತಿಯ ಸೇವಾ ಮಾಹಿತಿ ದಾಖಲಿಸಿ ಕ್ಲಸ್ಟರ್‌ವಾರು ಗುರುಸ್ಪಂಧನ ಕಾರ್ಯಕ್ರಮ ಹಮ್ಮಿಕೊಂಡು ಗುಣಾತ್ಮಕ ಶಿಕ್ಷ ಣಕ್ಕೆ ಪೂರಕವಾಗಲು ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರು ಮನವಿ ಮಾಡಿದರು.

ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಂ.ಹಿರೇಮಠ, ಕಾರ್ಯದರ್ಶಿ ಎಸ್‌.ಎಂ.ಲೋಕಣ್ಣವರ, ವಿ.ಬಿ.ಗುರವ, ವೈ.ಎಸ್‌.ಬುಡ್ಡಗೋಳ, ಬಿ.ಬಿ.ಬಾಯಣ್ಣವರ, ಸಿ.ಆರ್‌.ಪೂಜೇರ, ಸಿ.ಬಿ.ಅರಬಾವಿ, ಎಸ್‌.ಬಿ.ಹುಲಗಬಾಳಿ, ವಿ.ಬಿ.ಅರಗೆ, ಆರ್‌.ಡಿ.ಸೋಲಂದಕರ, ಎಸ್‌.ಎಸ್‌.ಕುಂದರಗಿ, ಬಿ.ಕೆ.ಪತ್ತಾರ, ಆರ್‌.ಕೆ.ಕಾಂಬಳೆ, ಡಿ.ವಿ.ನಾಯಕಪಾಟೀಲ, ಎಸ್‌.ಕೆ.ಖವನಿ, ಎಸ್‌.ಬಿ.ಹುಲಗಬಾಳಿ, ಡಿ.ಎಂ.ಬಲವಾನ. ಆರ್‌.ಎಂ.ಜಾಯಗೊಂಡೆ, ಎಸ್‌.ಕೆ.ಜೋಶಿ, ಪಿ.ಬಿ.ಪಾಟೀಲ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ