ಆ್ಯಪ್ನಗರ

ಸಮ್ಮೇದ ಶಿಖರಜಿ ಪಾವಿತ್ರ್ಯ ಉಳಿಸಲು ಆಗ್ರಹಿಸಿ ಮನವಿ

ರಾಯಬಾಗ: ಜೈನ ಧರ್ಮದ ಪವಿತ್ರ ಕ್ಷೇತ್ರವಾಗಿರುವ ಜಾರ್ಖಂಡ್‌ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಸಮ್ಮೇದ ಶಿಖರಜಿಯ ಪವಿತ್ರತೆ ಉಳಿಸುವಂತೆ ಆಗ್ರಹಿಸಿ ತಾಲೂಕಿನ ...

Vijaya Karnataka 24 Oct 2018, 5:00 am
ರಾಯಬಾಗ : ಜೈನ ಧರ್ಮದ ಪವಿತ್ರ ಕ್ಷೇತ್ರವಾಗಿರುವ ಜಾರ್ಖಂಡ್‌ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಸಮ್ಮೇದ ಶಿಖರಜಿಯ ಪವಿತ್ರತೆ ಉಳಿಸುವಂತೆ ಆಗ್ರಹಿಸಿ ತಾಲೂಕಿನ ಜೈನ ಸಮುದಾಯದವರು ಸಮುದಾಯದ ಅಧ್ಯಕ್ಷ ಡಿ.ಸಿ.ಸದಲಗಿ ನೇತೃತ್ವದಲ್ಲಿ ತಹಸೀಲ್ದಾರ್‌ ಡಿ.ಎಸ್‌ ಜಮಾದಾರ ಮೂಲಕ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಜಾರ್ಖಂಡ್‌ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web BEL-23RAIBAG1PHOTO


ಮಂಗಳವಾರ ಪಟ್ಟಣದ ಜೈನ ಬಸದಿಯಿಂದ ಜೈನ ಸಮುದಾಯದವರು ಶಿಖರಜಿಯ ಪವಿತ್ರತೆಯನ್ನು ಕಾಪಾಡುವಂತೆ ಘೋಷಣೆಗಳನ್ನು ಕೂಗುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಭಾಜಿ ವೃತ್ತದ ಬಳಿ ಮನವಿ ಸಲ್ಲಿಸಿದರು.

ಡಿ.ಸಿ.ಸದಲಗಿ, ಪಾರೀಸ ಉಗಾರೆ, ಶಾಂತಿನಾಥ ಶೆಟ್ಟಿ ಮಾತನಾಡಿದರು. ಡಿಕೆಎಸ್‌ಕೆ ನಿರ್ದೇಶಕ ಭರತೇಶ ಬನವಣೆ, ದಶರಥ ಶೆಟ್ಟಿ, ಈರಗೌಡಾ ಪಾಟೀಲ, ಡಾ.ಅಜಿತ ನಾಯಿಕ, ಜಿನ್ನಪ್ಪ ಶೆಟ್ಟಿ, ಅನಿಲ ಶೆಟ್ಟಿ, ಸಿದ್ದಪ್ಪ ನಾಗನೂರ, ಶೀತಲ ಬೆಡಕಿಹಾಳೆ, ಬಾಹುಬಲಿ ಪಾಟೀಲ, ರಾಜು ಜೋಕೆ, ವೈಭವ ಮಹಾಜನ ಸೇರಿದಂತೆ ಹಾರೂಗೇರಿ, ಮುಗಳಖೋಡ, ಅಳಗವಾಡಿ, ನಸಲಾಪುರ, ಸವದತ್ತಿ, ಗ್ರಾಮಗಳ ಜೈನ ಸಮುದಾಯ ಬಾಂಧವರು ಉಪಸ್ಥಿರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ