ಆ್ಯಪ್ನಗರ

ಮೌಲ್ಯಮಾಪನ ಸಮಸ್ಯೆ ಸರಿಪಡಿಸುವಂತೆ ಮನವಿ

ಬೆಳಗಾವಿ: ಎಸ್ಸೆಸ್ಸೆಲ್ಸಿಗೆ ದ್ವಿತೀಯ ಹಾಗೂ ತೃತಿಯ ಭಾಷೆಯಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಕನ್ನಡ ಉತ್ತರ ...

Vijaya Karnataka 5 May 2019, 5:00 am
ಬೆಳಗಾವಿ : ಎಸ್ಸೆಸ್ಸೆಲ್ಸಿಗೆ ದ್ವಿತೀಯ ಹಾಗೂ ತೃತಿಯ ಭಾಷೆಯಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಕನ್ನಡ ಉತ್ತರ ಪತ್ರಿಕೆಯನ್ನು ಬೆಳಗಾವಿ ವಿಭಾಗದ ಜಿಲ್ಲೆಯಲ್ಲಿಯೇ ಮೌಲ್ಯಮಾಪನ ಮಾಡಿಸಬೇಕು ಎಂದು ಒತ್ತಾಯಿಸಿ ಇಂಡಿಯನ್‌ ಮುಸ್ಲಿಂ ಲೀಗ್‌ ಸದಸ್ಯರು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web BLG-0405-2-52-4PRAMOD9


ದಕ್ಷಿಣ ಕರ್ನಾಟಕದ 'ಶುದ್ಧ ಪುಸ್ತಕೀಯ' ಭಾಷೆ ಶಿಕ್ಷ ಕರಿಂದ ಉತ್ತರ ಕರ್ನಾಟಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ದಕ್ಷಿಣ ಕರ್ನಾಟಕದ ಶಿಕ್ಷ ಕರಿಂದಾಗಲಿ ಅಥವಾ ಪ್ರಥಮ ಭಾಷೆ ಕನ್ನಡ ಶಿಕ್ಷ ಕರಿಂದಾಗಲಿ ಮೌಲ್ಯಮಾಪನ ಮಾಡಿಸಬಾರದು ಎಂದು ಆಗ್ರಹಿಸಿದರು.

ಶಾಲಾ ಶಿಕ್ಷಕರಿಂದ ಬೇಜವಾಬ್ದಾರಿ ಮೌಲ್ಯಮಾಪನ ನಡೆಯುತ್ತಿದೆ. ಹೀಗಾಗದಂತೆ ನಿಯಮ ರೂಪಿಸಬೇಕು. ಇದರಿಂದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಉತ್ತರ ಪತ್ರಿಕೆಯಲ್ಲಿ ಮಾಧ್ಯಮ ಬರೆಯುವುದರಿಂದ ಹಲವು ಶಿಕ್ಷಕರಿಗೆ ಮೌಲ್ಯಮಾಪನ ಮಾಡಲು ತಿರಸ್ಕಾರ ಭಾವನೆ ಬರುತ್ತಿದೆ. ಇದನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ದಸ್ತಗೀರ್‌ ಆಗಾ, ಕೆ.ಎಂ. ಕದೇರ ಮುಹಿಯುದ್ದೀನ್‌ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ