ಆ್ಯಪ್ನಗರ

ಗಾಂಜಾ ಮಾರಾಟ: ಐವರ ಬಂಧನ

ಬೆಳಗಾವಿ: ತಾಲೂಕಿನ ಖಾದರವಾಡಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಗುಂಪಿನ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ, ಗಾಂಜಾ ...

Vijaya Karnataka 19 Dec 2018, 5:00 am
ಬೆಳಗಾವಿ : ತಾಲೂಕಿನ ಖಾದರವಾಡಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಗುಂಪಿನ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ, ಗಾಂಜಾ ಸೇರಿದಂತೆ 42.80 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web BLG-1812-2-52-18MAHESH8


ಪೀರನವಾಡಿಯ ರಾಘವೇಂದ್ರ ಯೋಗೇಶ ನಾಯರಿ (25), ನಾಗ್ಯಾನಟ್ಟಿ ಗ್ರಾಮದ ಸುನಿಲ ಯಲ್ಲಪ್ಪ ಬಾಳೇಕುಂದ್ರಿ, ಪೀರನವಾಡಿ ಪಾಟೀಲ ಗಲ್ಲಿಯ ರೋಹಿತ ರವಿ ರಾವೂತ (22), ಮಚ್ಛೆ ಗ್ರಾಮದ ಭಾರತ ಗಲ್ಲಿಯ ರಾಹುಲ ಸೂರಜ ಜುವೇಕರ (19) ಮತ್ತು ಮಜಗಾವಿ ಬ್ರಹ್ಮನಗರದ ಅಕ್ಬರ್‌ ಇಸೂಬ ಶೇಖ (30) ಬಂಧಿತ ಆರೋಪಿಗಳು. ಸುನಿಲ ಬಾಳೇಕುಂದ್ರಿಯಿಂದ ಖರೀದಿ ಮಾಡಿ ತಂದಿದ್ದ ಗಾಂಜಾವನ್ನು ತಾಲೂಕಿನ ಖಾದರವಾಡಿ ಗ್ರಾಮದ ಹೊರವಲಯದಲ್ಲಿ ರೋಹಿತ, ರಾಹುಲ ಮತ್ತು ಅಕ್ಬರ್‌ ಇವರಿಗೆ ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ ರಾಘವೇಂದ್ರ ನಾಯರಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ನಂತರ ಆರೋಪಿಗಳ ಮಾಹಿತಿ ಮೇರೆಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಸುನಿಲ ಬಾಳೇಕುಂದ್ರಿಯನ್ನೂ ಬಂಧಿಸಿ ಎಲ್ಲ ಆರೋಪಿಗಳನ್ನು ತಾಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಿದ್ದಾರೆ.

ಬಂಧಿತರಿಂದ 17,900 ರೂ. ಮೌಲ್ಯದ 895 ಗ್ರಾಂ ಗಾಂಜಾ, 4,900 ರೂ. ನಗದು, 20 ಸಾವಿರ ರೂ. ಮೌಲ್ಯದ ಬೈಕ್‌ ಸೇರಿದಂತೆ ಒಟ್ಟು 42,800 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ಸಂಗಮೇಶ ಶಿವಯೋಗಿ, ಪಿಎಸ್‌ಐ ಕೃಷ್ಣವೇಣಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ