ಆ್ಯಪ್ನಗರ

ದೇಶಕ್ಕಾಗಿ ಮೋದಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ: ಪ್ರಧಾನಿ ಹೊಗಳಿದ ಜಿಟಿ ದೇವೇಗೌಡ

ತಂದೆ, ತಾಯಿಗೆ ಗೌರವ ಕೊಡಬೇಕು. ಮೋದಿ ಕೂಡ ತಾಯಿಗೆ ನಮಸ್ಕಾರ ಮಾಡುವುದನ್ನು ಮಾಧ್ಯಮದಲ್ಲಿ ತೋರಿಸ್ತಾರೆ. ಅವರಲ್ಲಿ ಸಂಸ್ಕಾರ, ಸಂಸ್ಕೃತಿ, ವಿನಯತೆ ಇದೆ ಎಂದು ಜಿಟಿ ದೇವೇಗೌಡ ಶ್ಲಾಘಿಸಿದರು.

Vijaya Karnataka Web 29 May 2019, 3:54 pm
ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಂತ ಪಕ್ಷದವರು ಹೊಗಳುವುದು ಸಹಜ. ಆದರೆ ಕಳೆದ ಕೆಲವು ವರ್ಷಗಳಿಂದ ದೇಶದೆಲ್ಲಡೆ ಪ್ರತಿಪಕ್ಷಗಳ ನಾಯಕರೂ ಮೋದಿ ಮೋಡಿಗೆ ಮಾರು ಹೋಗಿದ್ದಾರೆ.
Vijaya Karnataka Web ಜಿಟಿ ದೇವೇಗೌಡ
ಜಿಟಿ ದೇವೇಗೌಡ


ಮೋದಿ ಆಡಳಿತ ವೈಖರಿಯನ್ನು ಪ್ರತಿಪಕ್ಷದ ಕೆಲವು ನಾಯಕರು ಮುಕ್ತವಾಗಿ ಪ್ರಶಂಸಿದ್ದಾರೆ.

ಈಗ ಈ ಸಾಲಿಗೆ ರಾಜ್ಯ ಸಚಿವ ಜಿಟಿ ದೇವೇಗೌಡ ಕೂಡ ಸೇರಿದ್ದಾರೆ.

ಬೆಳಗಾವಿಯಲ್ಲಿ ನಡೆದ ಸಮಾರಂಭದ ನೇಪಥ್ಯದಲ್ಲಿ ಮಾತನಾಡಿದ ಜಿಟಿ ದೇವೇಗೌಡ, ಪ್ರಧಾಣಿ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳಿದರು.

ಪ್ರಧಾನಿ ನರೇಂದ್ರ ಮೋದಿಗೆ ಸ್ವಂತ ಆಸಕ್ತಿ ಇಲ್ಲ. ದೇಶಕ್ಕಾಗಿ ಅವರನ್ನು ಒಪ್ಪಿಸಿಕೊಂಡಿದ್ದಾರೆ. ಅವರು ದೇಶ ದೇಶ ಅಂತಿದ್ದಾರೆ. ಅದಕ್ಕೆ ಇಷ್ಟು ಪ್ರಚಂಡ ಗೆಲುವು ಕಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಟಿ ಮಾರಿದ್ದಾರೆ ಎನ್ನುವ ಘಟನೆ ಉದಾಹರಣೆಯನ್ನು ತೆಗೆದುಕೊಳ್ಳೋಣ. ಏಟು ತಿಂದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ತಗ್ಗಿ ಬಗ್ಗಿ ನಡೆದವರಿಗೆ ಗೌರವ ಜಾಸ್ತಿ ಎಂದು ಸಚಿವರು ತಿಳಿಸಿದರು.

ತಂದೆ, ತಾಯಿಗೆ ಗೌರವ ಕೊಡಬೇಕು. ಮೋದಿ ಕೂಡ ತಾಯಿಗೆ ನಮಸ್ಕಾರ ಮಾಡುವುದನ್ನು ಮಾಧ್ಯಮದಲ್ಲಿ ತೋರಿಸ್ತಾರೆ. ಅವರಲ್ಲಿ ಸಂಸ್ಕಾರ, ಸಂಸ್ಕೃತಿ, ವಿನಯತೆ ಇದೆ ಎಂದು ಜಿಟಿ ದೇವೇಗೌಡ ಶ್ಲಾಘಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ