ಆ್ಯಪ್ನಗರ

ನಾಲಾಗಳ ಸ್ವಚ್ಛತೆಗೆ ತಕ್ಷಣ ಕ್ರಮ ಜರುಗಿಸಲು ಸಚಿವ ರಮೇಶ ಜಾರಕಿಹೊಳಿ ಸೂಚನೆ

ಬೆಳಗಾವಿ: ಕಳೆದ ಮಳೆಗಾಲದ ವೇಳೆ ...

Vijaya Karnataka 16 Jun 2020, 5:00 am
ಬೆಳಗಾವಿ: ಕಳೆದ ಮಳೆಗಾಲದ ವೇಳೆ ನಗರ ಪ್ರದೇಶದಲ್ಲಿತೀವ್ರ ಹಾನಿಯುಂಟು ಮಾಡಿದ್ದ ಬಳ್ಳಾರಿ ನಾಲಾ ಪ್ರದೇಶವನ್ನು ಜಿಲ್ಲಾಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಪರಿಶೀಲಿಸಿದರು.
Vijaya Karnataka Web 15LBS3_53
ಬೆಳಗಾವಿಯ ಬಳ್ಳಾರಿ ನಾಲಾ ಪ್ರದೇಶವನ್ನು ಜಿಲ್ಲಾಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪರಿಶೀಲಿಸಿದರು. ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತಿತರರಿದ್ದರು.


''ನಗರದ ಪ್ರಮುಖ ಬಳ್ಳಾರಿ ನಾಲಾ, ಲೇಂಡಿ ನಾಲಾ ಹಾಗೂ ನಾಗಝರಿ ನಾಲಾಗಳ ಎರಡೂ ಬದಿಗೆ ಬೆಳೆದಿರುವ ಕಸವನ್ನು ತಕ್ಷಣ ಸ್ವಚ್ಛಗೊಳಿಸಬೇಕು. ನಗರದಲ್ಲಿಅಗತ್ಯವಿರುವ ಕಡೆಗಳಲ್ಲಿಎರಡೂ ಬದಿಗೆ ತಡೆಗೋಡೆ ನಿರ್ಮಿಸಿ'' ಎಂದು ರಮೇಶ ಜಾರಕಿಹೊಳಿ ಅವರು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್‌. ಅವರಿಗೆ ಸೂಚಿಸಿದರು.

''ಅತಿಕ್ರಮಣ ತೆರವು ಮತ್ತು ನಾಲಾಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ನಾಲಾಗಳ ಎರಡೂ ಬದಿಗೆ ಭದ್ರವಾದ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಬೇಕು'' ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

''ಮಳೆಗಾಲ ಆರಂಭವಾಗಿರುವುದರಿಂದ ತಕ್ಷಣ ನಾಲಾ ಸ್ವಚ್ಛಗೊಳಿಸಬೇಕು''ಎಂದು ಹೇಳಿದ ಶಾಸಕ ಅನಿಲ ಬೆನಕೆ, ಬ್ರಿಟಿಷ್‌ ಕಾಲದಲ್ಲಿನಿರ್ಮಿಸಿದ ಕಿರುಸೇತುವೆಗಳನ್ನು ಸಚಿವರಿಗೆ ತೋರಿಸಿ, ''ಇದೇ ಮಾದರಿಯಲ್ಲಿನಗರದ ವಿವಿಧ ಕಡೆಗಳಲ್ಲಿಸೇತುವೆ ನಿರ್ಮಿಸುವ ಅಗತ್ಯವಿದೆ'' ಎಂದರು.

ಪಾಲಿಕೆ ಆಯುಕ್ತ ಜಗದೀಶ್‌ ಕೆ.ಎಚ್‌. ಅವರು, ಬಳ್ಳಾರಿ ನಾಲಾ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.

''ಮಳೆಗಾಲದಲ್ಲಿತೀವ್ರ ಹಾನಿಯುಂಟು ಮಾಡುತ್ತಿರುವ ಬಳ್ಳಾರಿ ನಾಲಾ ಸ್ವಚ್ಛಗೊಳಿಸುವ ಜತೆಗೆ ಭವಿಷ್ಯದಲ್ಲಿಕೂಡ ನಗರದ ಜನರಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗುವುದು'' ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ತಿಳಿಸಿದರು.

ನಗರ ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಗುಜರಾತ್‌ ರಾಜ್ಯದ ಕೆಲವು ಕಡೆಗಳಲ್ಲಿನಾಲಾಗಳ ಮೇಲೆ ಹಾಗೂ ಅಕ್ಕಪಕ್ಕದಲ್ಲಿಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿಬಳ್ಳಾರಿ ನಾಲಾ ಇಕ್ಕೆಲಗಳಲ್ಲೂಸೋಲಾರ್‌ ಪ್ಯಾನಲ್‌ ಅಳವಡಿಸಲು ಯೋಜನೆ ರೂಪಿಸಬೇಕು.
-ಸುರೇಶ ಅಂಗಡಿ, ಕೇಂದ್ರ ಸಚಿವ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ