ಆ್ಯಪ್ನಗರ

ಅಥಣಿ ಪಟ್ಟಣದ ಗವಿಸಿದ್ಧಮಡಿಯಿಂದ ಕಾಣೆಯಾಗಿದ್ದ ವ್ಯಕ್ತಿ ಎರಡು ತಿಂಗಳ ಬಳಿಕ ಶವವಾಗಿ ಪತ್ತೆ

ಅಥಣಿ: ಏಪ್ರಿಲ್‌ 30ರಂದು ಪಟ್ಟಣದ ಗವಿಸಿದ್ಧಮಡಿಯಿಂದ ...

Vijaya Karnataka Web 29 Jun 2020, 5:00 am
ಅಥಣಿ: ಏಪ್ರಿಲ್‌ 30ರಂದು ಪಟ್ಟಣದ ಗವಿಸಿದ್ಧಮಡಿಯಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರ ಮೂಲದ ಧರೆ ಬಡಚಿ ಗ್ರಾಮದ ಗಂಗಯ್ಯ ಸಿದ್ದಯ್ಯಾ ಸ್ವಾಮಿ ಎರಡು ತಿಂಗಳ ನಂತರ ಸತ್ತಿ ಗ್ರಾಮದ ಹೊಲವೊಂದರ ಬಾವಿಯಲ್ಲಿಶವವಾಗಿ ಪತ್ತೆಯಾಗಿದ್ದಾರೆ.
Vijaya Karnataka Web 28-ATHANI-4 (GANGAYYA SWAMI)_53
ಗಂಗಯ್ಯ ಸಿದ್ದಯ್ಯಾ ಸ್ವಾಮಿ


ಕುತ್ತಿಗೆಗೆ ಕೇಬಲ್‌ ಬಿಗಿದ ಸ್ಥಿತಿಯಲ್ಲಿಶವ ಪತ್ತೆಯಾಗಿದೆ. ಖಾಸಗಿ ವಾಹನ ಚಾಲಕರಾಗಿದ್ದ ಗಂಗಯ್ಯ ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಕೆಲ ವರ್ಷಗಳಿಂದ ಪಟ್ಟಣದ ಗವಿಸಿದ್ಧಮಡಿಯಲ್ಲಿವಾಸವಾಗಿದ್ದರು. ಏ.30ರಂದು ಮನೆಯಿಂದ ಹೊರ ಗಂಗಯ್ಯ ಮರಳಿ ಮನೆಗೆ ಬಾರದೆ ಇರುವುದರಿಂದ ಅವರ ಪತ್ನಿ ಅಥಣಿ ಪೊಲಿಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದರು.

ಗಂಗಯ್ಯನ ಪತ್ನಿ ಹಾಗೂ ಮಹಾಂತೇಶ ಗಾಯಕವಾಡ ಎಂಬ ವ್ಯಕ್ತಿಯ ನಡುವೆ ಸಂಬಂಧ ಇತ್ತು. ಈ ವಿಷಯ ತಿಳಿದ ಗಂಗಯ್ಯ ಸಂಬಂಧ ನಿಲ್ಲಿಸುವಂತೆ ಎರಡು ತಿಂಗಳ ಹಿಂದೆ ಮಹಾಂತೇಶನಿಗೆ ಎಚ್ಚರಿಕೆ ನೀಡಿದ್ದ. ಇದರಿಂದ ಆಕ್ರೋಶಗಂಡ ಮಹಾಂತೇಶ ತನ್ನ ಸ್ನೇಹಿತರಾದ ರಾಹುಲ್‌ ಶಿಂಧೆ, ವಿಜಯ ಗಾಡವಾಲೆ ಎಂಬುವವರ ಸಹಾಯದಿಂದ ಸಂಕೋನಟ್ಟಿ ಗ್ರಾಮದ ಸಮೀಪ ಕೇಬಲ್‌ನಿಂದ ಗಂಗಯ್ಯ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಸತ್ತಿ ಗ್ರಾಮದ ಸಾಬು ಕೋಳಿ ಎಂಬುವರ ಗದ್ದೆಯ ಬಾವಿಯಲ್ಲಿಶವ ಬಿಸಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಮಹಾಂತೇಶ ಗಾಯಕವಾಡ, ರಾಹುಲ್‌ ಶಿಂಧೆ ಹಾಗೂ ವಿಜಯ ಗಾಡವಾಲೆಯನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಎಸ್‌.ವಿ. ಗಿರೀಶ ಮಾರ್ಗದರ್ಶನದಲ್ಲಿಸಿಪಿಐ ಶಂಕರಗೌಡ ಬಸನಗೌಡರ, ಪಿಎಸ್‌ಐ ಕುಮಾರ ಹಾಡಕಾರ ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ