ಆ್ಯಪ್ನಗರ

ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

ಪರಮಾನಂದವಾಡಿ: ಮಂಗಳವಾರ ಕಾಣೆಯಾಗಿದ್ದ ಗ್ರಾಮದ ಸುಟ್ಟಟ್ಟಿ ...

Vijaya Karnataka 19 Oct 2019, 5:00 am
ಪರಮಾನಂದವಾಡಿ: ಮಂಗಳವಾರ ಕಾಣೆಯಾಗಿದ್ದ ಗ್ರಾಮದ ಸುಟ್ಟಟ್ಟಿ ಕ್ರಾಸ್‌ ತೋಟದ ಮನೆಯ ಸಿದ್ದಪ್ಪ ಅತಾಲಟ್ಟಿ ಎಂಬುವರ ಪುತ್ರಿ ಲಕ್ಷ್ಮಿ ಸಿದ್ದಪ್ಪ ಅತಾಲಟ್ಟಿ (8) ಗುರುವಾರ ಶವವಾಗಿ ಪತ್ತೆಯಾಗಿದ್ದಾಳೆ. ಎರಡನೇ ತರಗತಿಯಲ್ಲಿವ್ಯಾಸಾಂಗ ಮಾಡುತ್ತಿದ್ದ ಈ ಬಾಲಕಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಭರತೇಶ ರಾವಸಾಬ ಮಿರ್ಜೆ (24)ಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 18PARAMANDNAWADI1_53


ಮಂಗಳವಾರ ಅಂಗಡಿಗೆ ಚಾಕಲೇಟ್‌ ತರುತ್ತೇನೆಂದು ಹೋಗಿದ್ದ ಬಾಲಕಿ ಲಕ್ಷ್ಮಿ ಸಂಜೆಯಾದರೂ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪಾಲಕರು ಕಬ್ಬಿನ ಗದ್ದೆ ಸೇರಿದಂತೆ ನಾನಾ ಕಡೆ ಹುಡುಕಿದ್ದಾರೆ. ಸಿಗದಿದ್ದಾಗ ಹತ್ತಿರದ ಕುಡಚಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಬುಧವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಕ್ಕಪಕ್ಕ ಸೇರಿದಂತೆ ಎಲ್ಲಕಡೆ ವಿಚಾರಿಸಿ ಬಾಲಕಿಯ ಸುಳಿವು ಸಿಗದೆ ಹೋದಾಗ ಘಟನಾ ಸ್ಥಳಕ್ಕೆ ಶ್ವಾನದಳ ಕರೆಯಿಸಿ ಹುಡುಕಿಸಿದ್ದಾರೆ. ಪಕ್ಕದ ಮನೆಯಲ್ಲಿವಾಸವಿದ್ದ ಭರತೇಶ ಮಿರ್ಜೆ ಮೇಲೆ ಸಂಶಯಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬಾಲಕಿಯನ್ನು ಕೊಲೆ ಮಾಡಿ ನಂತರ ಸೀರೆಯಿಂದ ಕಲ್ಲುಕಟ್ಟಿ ತಮ್ಮ ಬಾವಿಯಲ್ಲಿಎಸೆದಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಪಿಎಸ್‌ಐ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿನ ನೀರನ್ನು ಪಂಪ್‌ಸೆಟ್‌ಗಳ ಮೂಲಕ ಖಾಲಿ ಮಾಡಿಸಿ ಗುರುವಾರ ಬೆಳಗಿನ ಜಾವ ಬಾಲಕಿಯ ಶವವನ್ನು ಹೊರತೆಗೆದರು. ಈ ವೇಳೆ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶವ ಪರೀಕ್ಷೆಯ ನಂತರ ಅಂತ್ಯಸಂಸ್ಕಾರ ಮಾಡಲಾಯಿತು.

ಈ ವೇಳೆ ಉಪಸ್ಥಿತರಿದ್ದ ಸಾವಿರಾರು ಜನರು, ''ಬಾಲಕಿ ಲಕ್ಷಿತ್ರ್ಮೕಯನ್ನು ಅಪಹರಿಸಿ ಕೊಲೆಗೈದ ಭರತೇಶ ಮಿರ್ಜೆಯನ್ನು ನಮಗೆ ಒಪ್ಪಿಸಿ, ನಾವು ಅವನಿಗೆ ಸರಿಯಾದ ಶಿಕ್ಷೆ ವಿಧಿಸುತ್ತೇವೆ'' ಎಂದು ಪೊಲೀಸರಿಗೆ ಹೇಳುವ ಮೂಲಕ ಆಕ್ರೋಶ ಹೊರಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ