ಆ್ಯಪ್ನಗರ

ಕಾಲ ಕೂಡಿ ಬಂದಾಗ ಸಚಿವ ಸ್ಥಾನ ಕೊಡುತ್ತಾರೆ: ಮಹೇಶ್ ಕುಮಟಳ್ಳಿ ವಿಶ್ವಾಸ

ಸಚಿವ ಸ್ಥಾನದ ಭರವಸೆ ಕೊಟ್ಟಿದ್ದಾರೆ. ಕಾಲ ಕೂಡಿ ಬಂದಾಗ ಸಚಿವ ಸ್ಥಾನ ಕೊಡುತ್ತಾರೆ ಎಂದು ಶಾಸಕ ಮಹೇಶ ಕುಮಠಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಸಂಪುಟ ವಿಸ್ತರಣೆಯಾಗುತ್ತಿದ್ದು,ಕುಮಟಳ್ಳಿಗೆ ಸ್ಥಾನ ಸಿಕ್ಕಿಲ್ಲ

Vijaya Karnataka Web 13 Jan 2021, 3:17 pm
ಬೆಳಗಾವಿ: ಕಾಲ ಕೂಡಿ ಬಂದಾಗ ಸಚಿವ ಸ್ಥಾನ ಕೊಡುತ್ತಾರೆ. ಸಚಿವ ಸ್ಥಾನದ ಭರವಸೆ ಕೊಟ್ಟಿದ್ದಾರೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಮಹೇಶ್ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web Mahesh Kumathalli
ಮಹೇಶ ಕುಮಟಳ್ಳಿ


ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಲು ಏನೋ ಸಮಸ್ಯೆ ಆಗಿರಬಹುದು. ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ನೀಡಬಾರದು. ನನ್ನ ಕ್ಷೇತ್ರಕ್ಕೆ ಬೇಕಾದ ಕೆಲಸ ಮಾಡಿ ಕೊಡುತ್ತಿದ್ದಾರೆ. ಹಂತ ಹಂತವಾಗಿ ಸಚಿವರನ್ನಾಗಿ ಮಾಡಬಹುದು‌. ನನ್ನನ್ನು ಮಾಡಬಹುದೆಂಬ ವಿಶ್ವಾಸ ಇದೆ ಎಂದರು.

ನನ್ನನ್ನು ಏಕೆ ಸಚಿವರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಉತ್ತರ ಯಾರಿಂದಲೂ ಬರುತ್ತಿಲ್ಲ. ಗೆದ್ದ 12 ಶಾಸಕರ ಪೈಕಿ 11 ಶಾಸಕರನ್ನು ಸಚಿವರನ್ನಾಗಿ ಮಾಡಿದ್ದಾರೆ. ನನ್ನದೇನಾದರೂ ಸಮಸ್ಯೆ ಆಗಿ ಬಿಟ್ಟಿರಬಹುದು. ಹಾಗಂತ ನನ್ನನ್ನು ಕಡೆಗಣಿಸಿದಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನನ್ನ ಕ್ಷೇತ್ರದವರೇ ಡಿಸಿಎಂ ಆಗಿರೋದಕ್ಕೆ ನನಗೆ ಸಂತೋಷ ಇದೆ ಎಂದರು.

ಸಚಿವ ಸ್ಥಾನ ಕೊಡುವುದಾಗಿ ಉಪಚುನಾವಣೆ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಎಲ್ಲರೂ ಮಾತನಾಡಿದ್ದರು. ಏನೋ ಸಮಸ್ಯೆ ಇದೆ. ಅವರಲ್ಲಿಯೂ ಉತ್ತರ ಇಲ್ಲ. ನನ್ನಲ್ಲಿಯೂ ಉತ್ತರ ಇಲ್ಲ. ಕಾಲ ಕೂಡಿ ಬಂದಾಗ ಸಚಿವ ಸ್ಥಾನ ಸಿಗುತ್ತೆ. ಸಿಎಂಗೂ ಕೆಲವೊಂದು ಸಮಸ್ಯೆ ಇರುತ್ತವೆ. ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯಬೇಕು. ಬಿಜೆಪಿಗೆ ಬಂದ ಮೇಲೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ತೊರೆದವರು ಮತ್ತೆ ಪಕ್ಷಕ್ಕೆ ಮರಳುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನಿಡುತ್ತಿದ್ದಾರೆ. ಅವರದ್ದು ಏನೆಂಬ ಭಾವನೆ ಇದೆಯೋ ಗೊತ್ತಿಲ್ಲ. ಒಂದು ಪಕ್ಷ ಬಿಟ್ಟು ಬರೋದು ಸಣ್ಣ ಮಾತಲ್ಲ. ದೊಡ್ಡ ರಾಜಕೀಯ ವಿದ್ಯಮಾನದಲ್ಲಿ ಪಕ್ಷ ಬಿಟ್ಟಿದ್ದೇವೆ. ಮಾರ್ಚ್ ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ