ಆ್ಯಪ್ನಗರ

ಬಾಣಂತಿ ನಿರ್ಲಕ್ಷ್ಯಿಸಿದ ವೈದ್ಯ, ಸುಶ್ರೂಷಕಿಗೆ ತರಾಟೆ

ರಾಮದುರ್ಗ: ಹೆರಿಗೆಯ ಸಮಯದಲ್ಲಿ ಸರಿಯಾಗಿ ಹೊಲಿಗೆ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಇಲ್ಲಿನ ...

Vijaya Karnataka 22 May 2019, 5:00 am
ರಾಮದುರ್ಗ : ಹೆರಿಗೆಯ ಸಮಯದಲ್ಲಿ ಸರಿಯಾಗಿ ಹೊಲಿಗೆ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಇಲ್ಲಿನ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆ ಸುಶ್ರೂಷಕಿ ಹಾಗೂ ವೈದ್ಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web BLG-2105-2-52-21 RMD 1


ಪಟ್ಟಣದ ಮಹಿಳೆಯೊಬ್ಬರು ಹೆರಿಗೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ನಂತರ ಸರಿಯಾಗಿ ಹೊಲಿಗೆ ಹಾಕದ ಕಾರಣ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ವೈದ್ಯರಿಲ್ಲದ ಸಮಯದಲ್ಲಿ ಬಂದು ನೋಡಲು ಸುಶ್ರೂಷಕಿಯನ್ನು ವಿನಂತಿಸಿದಾಗ ಅವರು ಮೊಬೈಲ್‌ನಲ್ಲಿ ಆಟವಾಡುತ್ತ ಕಾಲ ಹರಣ ಮಾಡಿ ಸಂಜೆ ಬಂದು ಉಪಚರಿಸಿದ್ದಾರೆ ಎಂದು ಮಹಿಳೆಯ ಪತಿ ಆರೋಪಿಸಿದರು.

ವಿಷಯ ತಿಳಿದು ತಕ್ಷ ಣ ಸ್ಥಳಕ್ಕೆ ಆಗಮಿಸಿದ ಶಾಸಕ ಮಹಾದೇವಪ್ಪ ಯಾದವಾಡ ವೈದ್ಯರು ಹಾಗೂ ಸುಶ್ರೂಷಕಿಗೆ ಎಚ್ಚರಿಕೆ ನೀಡಿ, ''ಕತ್ರ್ಯವ್ಯ ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಇಂತಹ ಘಟನೆ ಮರುಕಳಿಸಿದರೆ ಕರ್ತವ್ಯದ ಮೇಲಿದ್ದವರನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡಲಾಗುವುದು'', ಎಂದು ರೇಗಿದರು.

ಇದೇ ವೇಳೆ ವೈದ್ಯಾಧಿಕಾರಿ ಡಾ. ವಿದ್ಯಾ ಅಮ್ಮಿನಬಾವಿ ಆಸ್ಪತ್ರೆಯ ಆವರಣದಲ್ಲಿರುವ ಶೌಚಾಲಯ ದುಸ್ಥಿತಿಯಲ್ಲಿರುವುದನ್ನು ಶಾಸಕರ ಗಮನಕ್ಕೆ ತಂದಾಗ ತಕ್ಷ ಣ ಪುರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಹೊಸ ಶೌಚಾಲಯ ಮತ್ತು ಗಟಾರ ನಿರ್ಮಾಣಕ್ಕೆ ಕ್ರಮಕೈಕೊಳ್ಳಲು ಅವರು ಸೂಚಿಸಿದರು.

ರಂಗನಾಥ ಹೂಗಾರ, ಪುರಸಭೆ ಸದಸ್ಯ ನಾಗರಾಜ ಕಟ್ಟಿಮನಿ, ಶ್ರೀನಿಧಿ ಸಪ್ಪಳಿಗ ಹಾಗೂ ಮಲ್ಲಿಕಾರ್ಜುನ ಧೂಪದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ