ಆ್ಯಪ್ನಗರ

ಪೌರಕಾರ್ಮಿಕರ ಸಮಸ್ಯೆಗೆ ಶಾಸಕರು ಪ್ರಾಮಾಣಿಕವಾಗಿ ಸ್ಪಂದಿಸಲಿ

ಉಗಾರ: ಪಟ್ಟಣದಲ್ಲಿ ನಿತ್ಯ ಶ್ರಮ ವಹಿಸಿ ದುಡಿಯುವುದರ ಜತೆಗೆ ಪಟ್ಟಣದ ಅಂದ ಹೆಚ್ಚಿಸಿ ಆರೋಗ್ಯ ಕಾಪಾಡುವ ...

Vijaya Karnataka 7 Dec 2018, 5:00 am
ಉಗಾರ : ಪಟ್ಟಣದಲ್ಲಿ ನಿತ್ಯ ಶ್ರಮ ವಹಿಸಿ ದುಡಿಯುವುದರ ಜತೆಗೆ ಪಟ್ಟಣದ ಅಂದ ಹೆಚ್ಚಿಸಿ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಸಹ ಸರಕಾರಿ ನೌಕರರ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಉಗಾರ ಪುರಸಭೆ ಉಪಾಧ್ಯಕ್ಷೆ ಸ್ವಾತಿ ಯೋಗೇಶ ಕುಂಬಾರ ಹೇಳಿದರು.
Vijaya Karnataka Web BEL-06 UGAR 1 NEWS SWATI KUMBAR PHOTO


ಅವರು ಬುಧವಾರ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ದೀಪಾವಳಿಗಿಂತ ಪೂರ್ವದಲ್ಲಿ ಉಗಾರ ಪುರಸಭೆಗೆ ಆಗಮಿಸಿದ್ದ ಶಾಸಕ ಶ್ರೀಮಂತ ಪಾಟೀಲರು ಪೌರಕಾರ್ಮಿಕರಿಗೆ ಕಳೆದ 9 ತಿಂಗಳುಗಳಿಂದ ಸಂಬಳವಿಲ್ಲದೆ ದುಡಿಯುತ್ತಿರುವ ಬಗ್ಗೆ ಗಮನ ಸೆಳೆದಾಗ ತಾವು ತಮ್ಮ ಸ್ವಂತ 10 ಲಕ್ಷ ರೂ. ದೀಪಾವಳಿಗೆ ಉಡುಗೊರೆಯಾಗಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ದೀಪಾವಳಿ ಮುಗಿದು ಒಂದು ತಿಂಗಳು ಗತಿಸಿದರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.

ಪುರಸಭೆಯ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಬಂದಾಗ ಪೌರ ಕಾರ್ಮಿಕರನ್ನು ಶಾಸಕರು ಸನ್ಮಾನ ಮಾಡುತ್ತಾರೆ. ಸನ್ಮಾನದಿಂದ ಪೌರ ಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಬಡ ಪೌರ ಕಾರ್ಮಿಕರಿಗೆ ಸಂಬಳ ಕೊಡಿಸುವಂತೆ ಶಾಸಕರು ಪ್ರಶ್ನೆ ಮಾಡಿ ಅವರ ಶ್ರಮದ ಸಂಬಳ ಸಿಗುವಂತೆ ಮಾಡಲಿ ಎಂದು ಸ್ವಾತಿ ಕುಂಬಾರ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ