ಆ್ಯಪ್ನಗರ

ಶಾಲೆ ಶೌಚಾಲಯ ದುಸ್ಥಿತಿಗೆ ಶಾಸಕರ ಆಕ್ರೋಶ

ಬೆಳಗಾವಿ: ಇಲ್ಲಿನ ಸರದಾರ ಹೈಸ್ಕೂಲ್‌ ಆವರಣದ ವಿದ್ಯಾರ್ಥಿನಿಯರ ...

Vijaya Karnataka 3 Aug 2019, 5:00 am
ಬೆಳಗಾವಿ: ಇಲ್ಲಿನ ಸರದಾರ ಹೈಸ್ಕೂಲ್‌ ಆವರಣದ ವಿದ್ಯಾರ್ಥಿನಿಯರ ಶೌಚಾಲಯಗಳ ದುಸ್ಥಿತಿಯನ್ನು ಶಾಸಕ ಅನಿಲ ಬೆನಕೆ ವೀಕ್ಷಿಸಿ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ಅವ್ಯವಸ್ಥೆ ಸ್ವಚ್ಛಗೊಳಿಸಲು ಶಾಸಕರು ಶನಿವಾರ ಶ್ರಮದಾನ ಕಾರ್ಯಕ್ರಮದ ಆಯೋಜನೆ ಮಾಡಿದ್ದಾರೆ.
Vijaya Karnataka Web BLG-0208-2-52-2RAJU-8


ಹೈಸ್ಕೂಲ್‌ನ ಆವರಣದಲ್ಲಿ ಶೌಚಾಲಯಗಳು ದುಸ್ಥಿತಿಯಲ್ಲಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರು ಶಾಸಕರಿಗೆ ದೂರು ನೀಡಿದ್ದರು. ಇದರ ಪರಿಶೀಲನೆಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ್ದ ಅವರು ಅಲ್ಲಿನ ಪರಿಸ್ಥಿತಿ ಕಂಡು ದಂಗಾಗಿ ಶಿಕ್ಷಕರು, ಪ್ರಾಚಾರ್ಯರ ವಿರುದ್ಧ ಕಿಡಿಕಾರಿದರು. ನಿಸರ್ಗ ಕರೆಗೆ ಸ್ಪಂದಿಸಲಾಗದ್ದರಿಂದ ವಿದ್ಯಾರ್ಥಿನಿಯರಿಗೆ ಕಿಡ್ನಿ ಸಮಸ್ಯೆ ಕಾಡುತ್ತಿದೆ. ಹುಕ್ಕೇರಿ, ಚಿಕ್ಕೋಡಿ, ಸಂಕೇಶ್ವರ ಕಡೆಯಿಂದ ಬರುವ ವಿದ್ಯಾರ್ಥಿನಿಯರು 2 ಗಂಟೆ ಪ್ರಯಾಣ ಮಾಡಿ ಬಂದಿರುತ್ತಾರೆ. 2000 ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸ್ಥೆಯೇ ಇಲ್ಲದಿದ್ದರೆ ಹೇಗೆ ಎಂದು ತರಾಟೆ ತೆಗೆದುಕೊಂಡರು. ಇಲ್ಲಿ ಶೌಚಾಲಯಗಳು ಇದ್ದರೂ ಸುಸ್ಥಿತಿಯಲ್ಲಿ ಇಲ್ಲ. ಅಲ್ಲಿಗೆ ಹೋಗಲು ದಾರಿಯಿಲ್ಲ. ಮಧ್ಯದಲ್ಲಿ ಹುಲ್ಲು ಬೆಳೆದಿದೆ. ಇದರಲ್ಲಿ ನೀರು ನಿಂತುಕೊಂಡಿದೆ. ಇದು ನಿಮಗೆ ತಿಳಿಯುವುದಿಲ್ಲವೇ ಎಂದು ದೂರಿದರು.

ಇದನ್ನೆಲ್ಲ ಸರಿಪಡಿಸಲು ಶನಿವಾರ ಬೆಳಗ್ಗೆ 10.30ರಿಂದ ಶ್ರಮದಾನ ಮಾಡೋಣ. ಪಾಲಿಕೆಯಿಂದ 2 ಜೆಸಿಬಿ, 1 ಸಕ್ಕಿಂಗ್‌ ಮಶಿನ್‌ ತರಿಸಲಾಗುತ್ತದೆ. ಇಲ್ಲಿನ ಆವರಣದಲ್ಲಿರುವ ಹೈಸ್ಕೂಲ್‌, ಕಾಲೇಜು ವಿದ್ಯಾರ್ಥಿಗಳೆಲ್ಲ ಶನಿವಾರ 10 ಗಂಟೆಗೆ ಬರಲಿ. ಸಿಬ್ಬಂದಿ, ಶಿಕ್ಷಕರು, ಪಾಲಿಕೆ ಪೌರಕಾರ್ಮಿಕರು, ನಮ್ಮ ಕಾರ್ಯಕರ್ತರು ಮತ್ತು ನಾನು ಸೇರಿಕೊಂಡು 12 ಗಂಟೆವರೆಗೆ ಕೆಲಸ ಮಾಡೋಣ. ನಂತರ ತರಗತಿಗಳನ್ನು ನಡೆಸಿರಿ ಎಂದು ಶಾಸಕರು ತಿಳಿಸಿದರು. ಇದಕ್ಕೆ ಎಲ್ಲರೂ ಒಪ್ಪಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ